26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ.23 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಂತಬೆಟ್ಟು ಇಲ್ಲಿ ನಡೆದ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ವೀರೋಚಿತ ಆಟದ ಪ್ರದರ್ಶನಗಳನ್ನು ನೀಡಿದ ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ಫೈನಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.


ತಂಡದಲ್ಲಿ ಸುಹೈಲ್(7ನೇ ತರಗತಿ) ಬೆಸ್ಟ್ ರೈಡರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರೆ, ಸಫ್ವಾನ್ (7ನೇ), ಶಾದ್ದಾದ್ (7ನೇ), ಆಶಿರ್ ಜವಾದ್ (7ನೇ), ಶಮ್ಮಾಸ್ (7ನೇ), ಇಶಾಮ್ ಅಲಿ (7ನೇ), ಮಹಮ್ಮದ್ ಫಾಜ್ (7ನೇ), ಮೊಹಮ್ಮದ್ ಆಶಿರ್ (7ನೇ), ಸುಫೈನ್ (7ನೇ), ಸಾಬಿತ್(7ನೇ), ತಮೀಮ್ (6ನೇ), ಆಶಿಮ್(6ನೇ) ಇವರು ಕಡೆಯವರೆಗೂ ಪಂದ್ಯಾಟಗಳ ಸ್ಥಿತಿಯನ್ನೇ ಬದಲಾಯಿಸಿ ಮನ್ ಶರ್ ತಂಡವು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಲು ಪ್ರಮುಖ ಪಾತ್ರ ವಹಿಸಿದರು.


ಪಂದ್ಯಾಟದ ಸಮಯದಲ್ಲಿ ಹಾಗೆಯೇ ಸಮಾರೋಪ ಕಾರ್ಯಕ್ರಮದಲ್ಲಿ ಮನ್ ಶರ್ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ರಮ್ಯಾ ಆರ್ ಹಾಗೂ ಸುಧಾ ಬಿ ಉಪಸ್ಥಿತರಿದ್ದರು.

Related posts

ಜು.1:ವೇಣೂರು ಪೊಲೀಸ್ ಠಾಣೆಯ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡ ಚೆವರ್‌ಲೆಟ್ ಎಂಜಾಯ್ ಕಾರು ಬಹಿರಂಗ ಹರಾಜು

Suddi Udaya

ಬಾರ್ಯ ಗ್ರಾ.ಪಂ. ಘನ ತ್ಯಾಜ್ಯ ಘಟಕದ ಉದ್ಘಾಟನೆ ಮತ್ತು ಗ್ರಂಥಪಾಲಕರ ದಿನಾಚರಣೆ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ಆಡಳಿತಾಧಿಕಾರಿ ಮತ್ತು ಇಲಾಖಾಧಿಕಾರಿಗಳ ಕೊರತೆಯಿಂದ ಶಿರ್ಲಾಲು ಗ್ರಾಮಸಭೆ ರದ್ದು

Suddi Udaya

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

Suddi Udaya

ಆ.14: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಅರಿವಿನ ದೀವಿಗೆ ಉಪನ್ಯಾಸ

Suddi Udaya
error: Content is protected !!