ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ: ಕೊಕ್ಕಡ ವಿನು ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ: ನೊಬೆಲ್ ಎಜುಕೇಶನ್ ಟ್ರಸ್ಟ್ ಈರೋಡ್ ತಮಿಳುನಾಡು ಇವರು ಆಯೋಜಿಸಿರುವ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕೊಕ್ಕಡ ವಿನು ಸ್ಕೂಲ್ ಆಫ್ ಆರ್ಟ್ಸ್ ನ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಲಭಿಸಿವೆ.

ವಿದ್ಯಾರ್ಥಿಗಳಾದ ವೀಕ್ಷ, ಧನರಾಜ್, ಅಕ್ಷಯ್ ಕೃಷ್ಣ ಇವರಿಗೆ ಪ್ರಶಸ್ತಿ ಲಭಿಸಿವೆ. ಪ್ರಶಸ್ತಿಯನ್ನು ಮಾಜಿ ನಿವೃತ್ತ ಇನ್ಸ್ಪೆಕ್ಟರ್ ಬಾಬು ಗೌಡ ವಿತರಿಸಿದರು. ವಿನು ಸ್ಕೂಲ್ ಆಫ್ ಆರ್ಟ್ಸ್ ಸ್ಥಾಪಕ ಚಿತ್ರಕಲಾ ಶಿಕ್ಷಕ ತರಬೇತಿಯನ್ನು ನೀಡಿ ಸ್ಪರ್ಧೆಯನ್ನು ಸಂಘಟಿಸಿದರು.

ಒಟ್ಟು 16ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲರಿಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

Leave a Comment

error: Content is protected !!