ಸರಳಿಕಟ್ಟೆಯಿಂದ ಗೋವಿಂದಗುರಿ ವರೆಗೆ ಹದಗೆಟ್ಟ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಬಾರ್ಯ : ಬಾರ್ಯ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿ ಸರಳಿಕಟ್ಟೆ ಯಿಂದ ಗೋವಿಂದ ಗುರಿ 600 ಮೀಟರ್ ನಷ್ಟು ರಸ್ತೆ ಸುಮಾರು 20 ವರ್ಷಗಳಿಂದ ದುರಸ್ತಿಯಾಗದೆ ಹೊಂಡ ಗುಂಡಿಗಳಿಂದ ವಾಹನ ಸವರಾರು ಪರದಾಡುತ್ತಿದ್ದ ಮಾತ್ರವಲ್ಲ ದ್ವಿಚಕ್ರ ವಾಹನದವರು ಬಿದ್ದು ಗಾಯಗೊಂಡಿರುವುದು ನೂರಾರು ಪ್ರಕರಣಗಳು ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಆ ರಸ್ತೆಯನ್ನು ನೋಡಲು ಬರಬೇಕೆಂದು ಪಟ್ಟು ಹಿಡಿದ ಕಾರಣ ಆ ರಸ್ತೆಯನ್ನು ವೀಕ್ಷಣೆ ಮಾಡಲು ಬಂದವರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.

ಈ ರಸ್ತೆಯನ್ನು ಶೀಘ್ರವಾಗಿ ಸರಿ ಮಾಡುವುದಾಗಿ ಭರವಸೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಬಾರ್ಯ ಗ್ರಾಮ ಪಂಚಾಯತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!