ಆದರ್ಶನಗರ ಕ್ರಾಸ್ ಬಳಿ ಟ್ಯಾಂಕರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕನು ಪರಾರಿ

Suddi Udaya

ಬೆಳ್ತಂಗಡಿ : ಆದರ್ಶನಗರ ಕ್ರಾಸ್ ಬಳಿ ಟ್ಯಾಂಕರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕನು ಪರಾರಿಯಾಗಿದ್ದು, ಇದನ್ನು ಕಂಡ ಎಸ್. ಡಿ. ಟಿ. ಯು ಆಟೋ ಯೂನಿಯನ್ ಹಳೆಪೇಟೆ ಇದರ ಅಧ್ಯಕ್ಷರಾದ ಶರೀಫ್ ಎಸ್. ಎಂ ತನ್ನ ಬಾಡಿಗೆದಾರರನ್ನು ಬಿಟ್ಟು ಅಪಘಾತಕ್ಕೆ ಒಳಗಾದವರನ್ನು ತನ್ನದೇ ರಿಕ್ಷಾದಲ್ಲಿ ಸಾಗಿಸಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಅಪಘಾತಕ್ಕೆ ಒಳಗಾದವರು ಯು. ಪ್ಲಸ್ ಚಾನೆಲ್ ನ ಸಿಬ್ಬಂದಿಗಳಾಗಿರುತ್ತಾರೆ.
ಟ್ಯಾಂಕರ್ ಲಾರಿಯನ್ನು ಚರ್ಚ್ ರಸ್ತೆಯ ಬಳಿ ತನ್ನ ರಿಕ್ಷಾದಲ್ಲಿ ಹಿಂಬಾಲಿಸಿ ತಡೆದು ನಿಲ್ಲಿಸಿ, ಬೆಳ್ತಂಗಡಿ ಠಾಣೆಗೆ ದೂರು ನೀಡಿದರು. ಆ ಕೂಡಲೇ ಠಾಣೆಯ ಪೊಲೀಸರು ತಕ್ಷಣ ಸ್ಪಂದಿಸಿ ಟ್ಯಾಂಕರ್ ಹಾಗೂ ಟ್ಯಾಂಕರ್ ಚಾಲಕನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

error: Content is protected !!