April 2, 2025
Uncategorized

ಭಾರಿ ಮಳೆಗೆ ಕಾಶಿಪಟ್ಣ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿತ: ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಮನವಿ

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಕೋಣೆಗಳ ಮೇಲ್ಛಾವಣಿ ಸೆ.1 ರಂದು ರಾತ್ರಿ ಸುರಿದ ಭಾರಿ ಮಳೆಗೆ ಕುಸಿದಿದ್ದು ಇದರ ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ರವರಿಗೆ ಶಾಲಾ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಮನವಿಯನ್ನು ಸಲ್ಲಿಸಿದರು.

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯು 1951 ರಲ್ಲಿ ಸ್ಥಾಪನೆಯಾಗಿದ್ದು 2025-26 ನೇ ಸಾಲಿಗೆ 75 ವರ್ಷಗಳು ಪೂರೈಸಿರುತ್ತದೆ. ಪ್ರಸುತ್ತ ಶೈಕ್ಷಣಿಕ ವರ್ಷದಲ್ಲಿ 162 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಲೆಯ 4 ತರಗತಿಗಳನ್ನು ನಡೆಸುತ್ತಿರುವ ತರಗತಿ ಕೋಣೆಗಳ ಛಾವಣಿ ಸೆ.1 ರಂದು ರಾತ್ರಿ ಕುಸಿದಿರುತ್ತದೆ. ಕುಸಿದಿರುವ ತರಗತಿ ಕೋಣೆಗಳಲ್ಲಿ ತರಗತಿಗಳನ್ನು ನಡೆಸಲು ಅಸಾಧ್ಯವಾಗಿರುತ್ತದೆ. ಆದುದರಿಂದ ಸದ್ರಿ ಶಾಲೆಯ 4 ತರಗತಿ ಕೋಣೆಗಳ ಛಾವಣಿ ದುರಸ್ತಿ ಮಾಡಬೇಕಾಗಿರುವುದರಿಂದ ಅದಕ್ಕೆ ಬೇಕಾಗಿರುವ ಅನುದಾನವನ್ನು ಮಂಜೂರುಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ. ಅಲ್ಲದೆ ಸದ್ರಿ ಶಾಲೆಗೆ 4 ಹೊಸ ತರಗತಿ ಕೋಣೆಗಳ ಅವಶ್ಯಕತೆ ಇರುವುದರಿಂದ ಮಂಜೂರುಗೊಳಿಸಬೇಕಾಗಿ ಸತೀಶ್ ಕಾಶಿಪಟ್ಣ ವಿನಂತಿಸಿದ್ದಾರೆ.

Related posts

ಕರ್ನಾಟಕ ಮುಸ್ಲಿಮ್ ಜಮಾ ಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ ವಾರ್ಷಿಕ ಮಹಾಸಭೆ

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರಿನಲ್ಲಿ ಬಂಧಿಸಿದ ಬೆಳ್ತಂಗಡಿ ಪೊಲೀಸ್ ತಂಡ

Suddi Udaya

ಹರೀಶ್ ಎನ್. ನಾಳ ಹೃದಯಾಘಾತದಿಂದ ನಿಧನ

Suddi Udaya

ಬಂದಾರು ಗ್ರಾಮದ ಮೈರೋಳ್ತಡ್ಕ,ಶಿವನಗರ – ಪೆರ್ಲಬೈಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯ ಬೋಲೋಡಿ ಎಂಬಲ್ಲಿನ ಸೇತುವೆ ಪಕ್ಕದ ಗುಡ್ಡ ಕುಸಿತ ರಸ್ತೆ ಸಂಚಾರ ಬಂದ್

Suddi Udaya
error: Content is protected !!