ಬೆಳ್ತಂಗಡಿ :ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ಸೇವಾ ಕಾರ್ಯಕ್ರಮ ಸೆ. 2ರಂದು ನಡೆಯಿತು.
ಉಜಿರೆಯ ಸಾನಿದ್ಯ ಸ್ಕಿಲ್ ಟ್ರೈನಿಂಗ್ ಸೆಂಟರ್ ಗೆ ರೂ.25000 ಗಳ ಚೆಕ್ ಹಸ್ತಾಂತರ, ಲಾಯಿಲ ದಯಾ ವಿಶೇಷ ಶಾಲೆಗೆ ರೂ. 25000 ದೇಣಿಗೆ, ಕಾರ್ಕಳ ಹೊಸಬೆಳಕು ಸೇವಾ ಸಂಸ್ಥೆಗೆ ರೂ.25000, ಬೆಳ್ತಂಗಡಿ ಸಂಜಯನಗರದಲ್ಲಿರುವ ಓಲ್ಡ್ ಏಜ್ ಹೋಂ ಗೆ ರೂ.25000 ಮೌಲ್ಯದ ದಿನಸಿ ಹಾಗೂ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಸೇವಾ ಟ್ರಸ್ಟ್ ಇದರ ಕಟ್ಟಡ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರ, ಸೇವಾ ಟ್ರಸ್ಟ್ ಕಟ್ಟಡ ಸಮಿತಿ ಕೋಶಾಧಿಕಾರಿಗಳಾದ ನಿತ್ಯಾನಂದ್ ನಾವರ, ಪೂರ್ವ ಪ್ರಾಂತಿಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ದಾ, ಸದಸ್ಯರಾದ ನಾಣ್ಯಪ್ಪ ನಾಯ್ಕ್, ಶಾಲಿನಿ ವಸಂತ್, ದೀಪ ಕಿರಣ್ ಉಪಸ್ಥಿತರಿದ್ದರು.