37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

ಕಣಿಯೂರು: ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ(46ವ)ರವರು ಸೆ.4ರಂದು ಅನಾರೋಗ್ಯದಿಂದ ನಿಧನರಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮುಂಜ ದರ್ಖಾಸು ಮನೆ ಉಮೇಶ್ ರವರ ದೂರಿನಂತೆ ಉಮೇಶ್ ರವರ ಅಣ್ಣ ಕುಶಾಲಪ್ಪ (46) ರವರು ಸುಮಾರು 02 ವರ್ಷಗಳಿಂದ ಬಿ.ಪಿ ಶುಗರ್, ಅಸ್ತಮ ಖಾಯಿಲೆಯಿಂದ ಬಳಲುತ್ತಿದ್ದು ಇತೀಚೆಗೆ ಕೆಲಸಕ್ಕೆ ಹೋಗದೇ ಕಣಿಯೂರು ಗ್ರಾಮದ ಪದ್ಮುಂಜ ದರ್ಖಾಸು ಮನೆಯಲ್ಲಿ ಇದ್ದು, ಸುಮಾರು 03 ದಿನಗಳಿಂದ ಊಟ ಮಾಡಲು ಆಗದೇ ವಾಂತಿ ಮಾಡಿಕೊಂಡು ಮನೆಯಲ್ಲಿ ಇದ್ದವನು ಸೆ. 04. ರಂದು ಕುಶಾಲಪ್ಪನು ವಿಪರೀತ ಸುಸ್ತು ಅಗಿ ಯಾವುದೇ ಮಾತುಗಳನ್ನು ಆಡದೇ ಇದ್ದವನನ್ನು ಉಮೇಶ್ ಮತ್ತು ಕುಶಾಲಪ್ಪರವರ ಹೆಂಡತಿ ಉಷಾ ಹಾಗೂ ನೆರೆಮನೆಯವರಾದ ಕೊರಗಪ್ಪ ಎಂಬವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಅಸ್ಷತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಕುಶಾಲಪ್ಪನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಕುಶಾಲಪ್ಪನು ಸರಿಯಾಗಿ ಆಹಾರ ಸೇವನೆ ಮಾಡದೇ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ: 32/2024 ಕಲಂ: 194 BNSS. ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಅಗ್ರಿಲೀಫ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗಾವಕಾಶ: ಆ.18ರಂದು ಒಷ್ಯನ್ ಪರ್ಲ್ ನಲ್ಲಿ ಮೆಗಾ ಉದ್ಯೋಗ ಮೇಳ

Suddi Udaya

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya

ನ.29: ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಹೆಚ್.ಬಿ ಲೀಲಾವತಿ ಸೇವಾ ನಿವೃತ್ತಿ

Suddi Udaya

ಉಜಿರೆಯಲ್ಲಿ ಪ್ರವೀಣ್ ರವರ ಮಾಲೀಕತ್ವದ ಶ್ರೀ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ

Suddi Udaya

ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ ನಲ್ಲಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

Suddi Udaya
error: Content is protected !!