September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

ಪುದುವೆಟ್ಟು ಗ್ರಾಮದ ನಡ್ಯೇಲು ಎಂಬಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಓಡಾಡುತ್ತಿದ್ದು ಸೆ.5 ರಂದು ರಾತ್ರಿ ಕಾಡಾನೆಯು ಗದ್ದೆಗಳಿಗೆ ಹಾಗೂ ತೋಟಗಳಿಗೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಪರಿಸರದಲ್ಲಿ ಓಡಾಡುತ್ತಿದ್ದು ಅಪಾರ ಕೃಷಿ ಹಾನಿ ಮಾಡಿದೆ. ನಡ್ಯೇಲು ನಾರಾಯಣ ಗೌಡ ರವರ ಗದ್ದೆಗೆ ನುಗ್ಗಿ ಭತ್ತದ ಗಿಡ, ತೆಂಗಿನ ಗಿಡಗಳು ಹಾಗೂ ಸುಂದರ ಗೌಡರವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ.

ಸ್ಥಳಕ್ಕೆ ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಅನಿತಾ, ಅರಣ್ಯ ಅಧಿಕಾರಿ ರವಿಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅರಣ್ಯಾಧಿಕಾರಿ, ಇಂದು(ಸೆ.6) ರಾತ್ರಿ ನಾಲ್ವರು ಅರಣ್ಯ ಅಧಿಕಾರಿಗಳು, ಹಾಗೂ ಊರಿನ ಗ್ರಾಮಸ್ಥರು ಸೇರಿ ಆನೆಯನ್ನು ಕಾಡಿಗೆ ಬೆನ್ನಟ್ಟುವ ಬಗ್ಗೆ ತಿಳಿಸಿದರು.

Related posts

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ 18ನೇ ವರ್ಷದ ವಾರ್ಷಿಕೋತ್ಸವ-ವಿಶ್ವಕರ್ಮ ಪೂಜೆ

Suddi Udaya

ವಿಶ್ವ ಪ್ರಜಾಪ್ರಭುತ್ವ ದಿನ ಪ್ರಯುಕ್ತ ವಿಮ್ ಬೆಳ್ತಂಗಡಿ ವತಿಯಿಂದ ಸೆಮಿನಾರ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಪ್ರತಿಷ್ಠಿತ ಕೇದೆ ಗುತ್ತಿನ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

Suddi Udaya

ಮಂಗಳೂರಿನಲ್ಲಿ ಆನೆದಂತ ಮಾರಟಕ್ಕೆ ಯತ್ನ; ಪುದುವೆಟ್ಟು ಗ್ರಾಮದ ಶಶಾಂಕ ವಶಕ್ಕೆ

Suddi Udaya

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅ.ಪ್ರೌ. ಶಾಲೆ ಮತ್ತು ಪ. ಪೂ. ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ

Suddi Udaya

ಅಳದಂಗಡಿ ಮೆಸ್ಕಾಂ ಇಲಾಖೆಯಲ್ಲಿ ಆಯುಧ ಪೂಜೆ

Suddi Udaya
error: Content is protected !!