July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ (ತೆನೆ ಹಬ್ಬ)

ಬೆಳ್ತಂಗಡಿ: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಸೆ.8ರಂದು ಆಚರಿಸಲಾಯಿತು. ಈ ಹಬ್ಬವನ್ನು ಮಾತೆ ಕನ್ಯಾ ಮರಿಯಮ್ಮರ ಹುಟ್ಟು ಹಬ್ಬದಂದು ಆಚರಿಸುವುದು ರೂಡಿ. ಬೆಳ್ತಂಗಡಿ ಚರ್ಚ್ ಬಸ್ ಸ್ಟ್ಯಾಂಡ್ ಬಳಿಯ ಸರ್ವಿಸ್ ರೋಡ್ ಬಳಿ ತೆನೆಯನ್ನು ಆಶೀರ್ವಾದಿಸಿ ದೇವರ ಶುಭ ಸಂದೇಶವನ್ನು ಚರ್ಚ್ ಧರ್ಮ ಗುರುಗಳಾದ ವಂದನಿಯ ವಾಲ್ಟರ್ ಡಿಮೆಲ್ಲೊರವರು ತುಳುವಿನಲ್ಲಿ ನೀಡಿದರು.

ವಂದನೀಯ ಗುರುಗಳಾದ ಕ್ಲಿಫರ್ಡ್ ಪಿಂಟೊ ರವರು ತೆನೆಯನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಂದನೀಯ ಗುರುಗಳಾದ ಜೇಸುದಾಸ್ ಕೂಡ ಉಪಸ್ಥಿತರಿದ್ದರು. ಮೆರವಣಿಗೆ ನಡೆದು ಚರ್ಚ್ನಲ್ಲಿ ಬಲಿಪೂಜೆ ನಡೆಯಿತು. ಹಲವಾರು ಭಕ್ತರು ಈ ಬಲಿಪೂಜೆಯಲ್ಲಿ ಪಾಲುಗೊಂಡರು. ಬಲಿಪೂಜೆಯ ನಂತರ ಎಲ್ಲಾ ಭಕ್ತರಿಗೆ ಸಿಹಿ ಹಂಚಲಾಯಿತು ಹಾಗೂ ಎಲ್ಲಾ ವಾಹನಗಳನ್ನು ಆಶೀರ್ವಾದಿಸಲಾಯಿತು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಹೊಸ ಊಟವನ್ನು ಸವಿಯುವುದೊಂದಿಗೆ ಸಹಬಾಳ್ವೆಯ ಸಂದೇಶವನ್ನು ಸಾರಲಾಯಿತು.

Related posts

ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಬಾರ್ಯ-ಪುತ್ತಿಲ-ತೆಕ್ಕಾರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ,ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆಯ ಜಂಟಿ ಆಶ್ರಯದಲ್ಲಿ ಗುರು ಪೂಜೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ವೇಣೂರು: ಹಂದೇವು ನಿವಾಸಿ ಕಲ್ಯಾಣಿ ದೇವಾಡಿಗ ನಿಧನ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸನತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ

Suddi Udaya
error: Content is protected !!