ಪಟ್ಟೂರು ಹಾಲು ಉತ್ಪದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಪಟ್ರಮೆ: ಪಟ್ಟೂರು ಹಾಲು ಉತ್ಪದಕರ ಸಹಕಾರಿ ಸಂಘದ ಸಾಮಾನ್ಯ ಸಭೆಯು ಸೆ.20ರಂದು ಪಟ್ಟೂರು ಹಾಲು ಖರೀದಿ ಕೇಂದ್ರದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಸುಂದರ ಪೂಜಾರಿ, ಪ್ರವೀಣ್ ಶೆಟ್ಟಿ ದೇರಾಜೆ, ಹೊನ್ನಪ್ಪ ಗೌಡ ಪೂವಾಜೆ, ಶಶಿಧರ್ ಬಡಿಜಾಲ್, ಹರೀಶ್ ಗುಂಡಿಲೆ, ಶ್ರೀಮತಿ ಹರಿಣಾಕ್ಷಿ ಗುಂಡಿಲೆ, ಶ್ರೀಮತಿ ವೇದಾವತಿ ಕೆಂಗುಡೆಲು, ಉಮೇಶ್ ಕೊಡಂಚಡ್ಕ, ಪುತ್ತ ಬಾಂತಿಮಾರು ಉಪಸ್ಥಿತರಿದ್ದರು.

ಸಂಘದ ಉಪ ಹಾಲು ಖರೀದಿ ಕೇಂದ್ರ ಪಕ್ಕದ ಮುಂಡೂರುಪಲಿಕೆಯಲ್ಲಿ ಪ್ರಾರಂಭವಾಗಿದ್ದು, ಹಾಗೇನೇ ಇನ್ನು ಮುಂದಕ್ಕೆ ಪಟ್ರಮೆಯಲ್ಲಿ ಕೂಡ ಹಾಲು ಖರೀದಿ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ತಿಳಿಸಿದರು.

ಸಂಘಕ್ಕೆ ಹಾಲು ಹಾಕುವ ಎಲ್ಲರಿಗೂ ಸಂಘದ ವತಿಯಿಂದ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಶ್ರೀಮತಿ ಸುಗಂಧಿ ಸ್ವಾಗತಿಸಿ, ವಂದಿಸಿದರು.

Leave a Comment

error: Content is protected !!