ಗುರುವಾಯನಕೆರೆ ಗೆಳೆಯರ ಬಳಗದ 34 ನೇ ವಷ೯ದ ಸಾರ್ವಜನಿಕ ಶ್ರೀ ಶಾರಾದೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ.

Suddi Udaya

ಗುರುವಾಯನಕೆರೆ. ಇಲ್ಲಿನ ಗೆಳೆಯರ ಬಳಗದ ವತಿಯಿಂದ ಜರಗುವ 34 ನೇ ವರುಷದ ಸಾರ್ವಜನಿಕ ಶ್ರೀ ಶಾರಾದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಸೇರಿದ ಗಣ್ಯರ ಸಮ್ಮುಖದಲ್ಲಿ ಬಳಗದ ಅಧ್ಯಕ್ಷರಾದ ಕೃಷ್ಣಾನಂದ ಕುಲಾಲ್ ರವರು ನೆರವೇರಿಸಿದರು.

ಅತಿಥಿಗಳಾಗಿ ಮೆಸ್ಕಾಂ ನಿವೃತ್ತ ಜೆ. ಇ. ಯೋಗೀಶ್ ಆಚಾರ್ಯ ಯರ್ಡುರು, ಶ್ರೀಗುರು ಡ್ರೈವಿಂಗ್ ಮಾಲಕರದ ರಮಾನಂದ ಸಾಲ್ಯಾನ್ ಹಾಗು ಗೆಳೆಯರ ಬಳಗದ ಸರ್ವಸದಸ್ಯರು, ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಬಳಗದ ಆನಂದ ಕೋಟ್ಯಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!