ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

Suddi Udaya

ನಾರಾವಿ: ಪರಸ್ಪರ ಯುವಕ ಮಂಡಲ ಈದು -ನಾರಾವಿ ನೇತೃತ್ವದಲ್ಲಿ ನಡೆಯುವ ನಾರಾವಿ ಮಹಾ ಚಂಡಿಕಾ ಯಾಗದ ಪ್ರಥಮ ಕಾರ್ಯಕ್ರಮ ಪೋಸ್ಟರ್ ಬಿಡುಗಡೆಯು ಸೆ. 22 ರಂದು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಪ್ರಧಾನ ಅರ್ಚಕರು ವೇದಮೂರ್ತಿ ಶ್ರೀ ಕೃಷ್ಣ ತಂತ್ರಿ,, ಶ್ರೀ ನಾರಾವಿ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯ ಅಧ್ಯಕ್ಷ ನಿರಂಜನ ಅಜ್ರಿ ರಾಮೆರಗುತ್ತು, ನಾರಾವಿ ಭಂಡಾರಿ ಸಮಾಜ ಪ್ರಮುಖರು ಸುಧಾಕರ ಭಂಡಾರಿ, ನಾರಾವಿ ಬಿಲ್ಲವ ಸಮಾಜ ಗುರಿಕಾರರು ಸುರೇಶ್ ಬಾಂದೊಟ್ಟು, ಕುಲಾಲ ಸಮಾಜ ಕಲ್ಯಾಣ ಸಂಘ ಹೊಸ್ಮಾರು ಅಧ್ಯಕ್ಷ ಪ್ರಮೋದ್ ಕುಲಾಲ್, ಈದು ಬಂಟರ ಸಂಘ ಅಧ್ಯಕ್ಷ ಶಂಕರ ಶೆಟ್ಟಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ನಾರಾವಿ ಅಧ್ಯಕ್ಷ ರಾಮಚಂದ್ರ ಆಚಾರ್ಯ, ನಾರಾವಿ ದೇವಾಡಿಗ ಸಂಘ ಅಧ್ಯಕ್ಷ ರಾಘು ದೇವಾಡಿಗ ಓಮಾಜೆ, ಹೆಗ್ಡೆ ಸಮಾಜ ನಾರಾವಿ ದೇವಸ ಮನೆ ಪ್ರಮುಖರು ಶೇಖರ ಹೆಗ್ಡೆ, ಹರಿಸೇವಾ ಭಜನಾ ಸಮಿತಿ ಮಂಜುನಗರ ಗೌರವಾಧ್ಯಕ್ಷ ಸುಧಾಕರ, ವಸಂತ ಪಡ್ಡಾಯಿ ಕಾಪು ಪಂಡಿತರು ನಾರಾವಿ, ಈದು ಮಡಿವಾಳ ಸಮಾಜ ಬಾಬು ಮಡಿವಾಳ, ಸೇರಿಗಾರ ಸಮಾಜ ಹಟ್ಯಡ್ಕ ಮನೆ ಪ್ರಮುಖರು ನಾರಾವಿ ಸದಾನಂದ ಸೇರಿಗಾರ, ಈದು ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಅಲಿಮಾರು ಗುಡ್ಡೆ ಸುಂದರ ಬಿ, ಮಲೆಕುಡಿಯ ಸಮಾಜ ನಾರಾವಿ ಕುಳಂತಾಜೆ ಪ್ರಮುಖರು ಅಣ್ಣಿ ಮಲೆಕುಡಿಯ, ದೈವನರ್ತಕರು ಮರೋಡಿ ಸುರೇಶ ಪರವ, ಸದಾನಂದ ಕೊರಗ, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!