23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

ಬಂದಾರು: ಶಾಲಾ ಮಕ್ಕಳು, ಕೆಲಸಕ್ಕೆ ತೆರಲುವ ಪ್ರಯಾಣಿಕರು ಸರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸು ವ್ಯವಸ್ಥೆ ಇಲ್ಲದೆ ಬಂದಾರುವಿನಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಂದಾರು ಪಂಚಾಯತ್ ಬಳಿಯಿಂದ ಬೆಳಗ್ಗೆ 7.00 ಗಂಟೆಗೆ ಬೈಪಾಡಿ – ಕೊಯ್ಯೂರು – ಬೆಳ್ತಂಗಡಿ ಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ಒಂದು ದಿನ ಬರುತ್ತೆ ಇನ್ನೋಂದು ದಿನ ಇರೋದಿಲ್ಲ. ಕೊಯ್ಯೂರು ಪಿಜಕ್ಕಳ ಬಳಿ ಗೇರ್ ಸಮಸ್ಯೆ ಯಿಂದ ಬಾಕಿಯಾಗೋದು ಇದು ಮಾಮೂಲು ಆಗಿದೆ.

ಸಂಜೆ 4.15 ಗಂಟೆಗೆ ಬೆಳ್ತಂಗಡಿಯಿಂದ , ಕೊಯ್ಯುರು, ಬೈಪಾಡಿ ಮಾರ್ಗವಾಗಿ ಬಂದಾರು ಪಂಚಾಯತ್ ಬಳಿಗೆ ಬಂದು ತಿರುಗಿ ವಾಪಾಸ್ ಆಗುತ್ತದೆ. ಆದ್ರೆ ಕೆಲವೊಂದು ದಿನದ ಸಂಚಾರಕ್ಕೆ ಯೋಗ್ಯವಿಲ್ಲದ ಬಸ್ ಕಳುಹಿಸಿ ಶಾಲಾ ಮಕ್ಕಳನ್ನು ಬೈಪಾಡಿ ಬಳಿ ಹಾಗೂ ಬಂದಾರು ಮಿಲ್ಕ್ ಡೈರಿ ಇಳಿಸಿ ಹೋಗ್ತಾರೆ ಕೇಳಿದ್ರೆ ಅಲ್ಲಿ ಹೋಗೋಕೆ ಆಗಲ್ಲ ಅಂತ ಹೇಳ್ತಾರೆ ಉತ್ತರ ನೀಡುತ್ತಾರೆ.

ಸಂಜೆ ಕಾಂತಾಜೆ ಕೊಯ್ಯುರು ಬಳಿ ಬಸ್ ಮುಂದೆ ಚಳಿಸದೇ ಮಕ್ಕಳಲ್ಲೆ ದುಡಿಸಿದ ಪ್ರಸಂಗ ನಡೆದಿದೆ. ಎಷ್ಟು ದೂಡಿದ್ರು ಬಸ್ ಮುಂದೆ ಸಾಗಲ್ಲ ಕೊನೆಗೆ ಅಲ್ಲೇ ಜಖಂ ಆಗುತ್ತೆ, ಅದ್ರಲ್ಲೇ ಬoದಿರುವ ಮಕ್ಕಳ ಕಥೆ ಅಯೋಮಯವಾಗುತ್ತದೆ.

ಇತ್ತೀಚಿಗೆ ಕೊಯ್ಯುರು ಕಾಲೇಜು ಬಳಿ ಬಸ್ ನ ಗೇರ್ ಬೀಳೋದಿಲ್ಲ ಅಂತ ಹೇಳಿ ಬೈಪಾಡಿ ತನಕ ಬಸ್ ಬಂದು ಅಲ್ಲೇ ಮಕ್ಕಳನ್ನು ಇಳಿಸಿ ಹೋಗಿದ್ದಾರೆ .ಶಾಲಾ, ಕಾಲೇಜು, ವಿದ್ಯಾರ್ಥಿಗಳು, ಉದ್ಯೋಗ ಕ್ಕೆ ತೆರಳುವವರು, ಪ್ರಯಾಣಿಕರ ಸಮಸ್ಯೆಗೆ ಇತ್ಯರ್ಥ ಯಾವಾಗ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಖಕಿ, ಉಪನ್ಯಾಸಕಿ ಪದ್ಮಲತಾ ಮೋಹನ್ ನಿಡ್ಲೆ ಇವರಿಗೆ ಸನ್ಮಾನ

Suddi Udaya

ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜು :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya

ಜಿನ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಅಶೋಕ್ ಆಲೂರ್ ಸಿರಿ ಸಂಸ್ಥೆಗೆ ಭೇಟಿ

Suddi Udaya
error: Content is protected !!