ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ನಿಡ್ಲೆ : ಇಂದು (ಸೆ. 30)ರಂದು ಸಂಜೆ ಬಡಿದ ಸಿಡಿಲಿಗೆ ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು, ಮನೆಯ ಇನ್ವರ್ಟರ್, ಡಿಶ್ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.

ರಾಜೇಂದ್ರರವರ ಮನೆ ಬಳಿ ಬಿದ್ದ ಸಿಡಿಲಿಂದ ನೆಲದಲ್ಲಿ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದ್ದು, ತೆಂಗಿನ ಗಿಡಕ್ಕೂ ಹಾನಿಯಾಗಿದೆ. ಶೆಡ್ ನ ಸಿಮೆಂಟ್ ಶೀಟ್ ಹುಡಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ. ಸಿಡಿಲಿನಿಂದ ಅಕ್ಕ ಪಕ್ಕದ ಮನೆಯವರಿಗೂ ಕಾಲಿಗೆ ಹೊಡೆದಂತ ಅನುಭವ ಆಗಿದೆ. ಸಿಡಿಲಿನಿಂದ ರಾಜೇಂದ್ರರವರಿಗೆ ಅಂದಾಜು ರೂ. 1ಲಕ್ಷದಷ್ಟು ನಷ್ಟ ಸಂಭವಿಸಿದೆ.

Leave a Comment

error: Content is protected !!