ನಿಡ್ಲೆ ಸಿಡಿಲು ಬಡಿದು ಹಾನಿಗೊಳಗಾದ ರಾಜೇಂದ್ರ ಗೌಡ ರವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನಿಂದ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ವತಿಯಿಂದ ಸಿಡಿಲು ಬಡಿದು ಹಾನಿಗೊಳಗಾದ ನಿಡ್ಲೆ ಗ್ರಾಮ ದ ಗಾಣಂತಿ ಮನೆ ರಾಜೇಂದ್ರ ಗೌಡ ಅವರ ಮನೆಗೆ ಭೇಟಿ ನೀಡಿ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ವಿಜಯ ಗೌಡ ವೇಣೂರು, ಭರತ್ ಬಂಗಾಡಿ, ಸೂರಜ್ ಗೌಡ ವಳಂಬ್ರ, ವಸಂತ ಗೌಡ ಮರಕಡ, ನವೀನ್ ಬಿ.ಕೆ, ದಿನೇಶ್ ಕೊಯ್ಯುರು, ರಾಜೇಶ್ ತಿಶುಲ್, ಸತೀಶ್ ಬಿದ್ರಬೆಟ್ಟು, ನಿಡ್ಲೆ ಸಮಿತಿಯ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಉಪಸ್ಥಿತರಿದ್ದರು.

Leave a Comment

error: Content is protected !!