ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಅ.3 ರಿಂದ ಅ.11 ರವರೆಗೆ ಶರನ್ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರುಗಲಿದೆ.

ಇಂದು (ಅ.3 ) ಬೆಳಿಗ್ಗೆ ದೇವಾಲಯದಲ್ಲಿ ತೆನೆ ಕಟ್ಟುವುದು ಹಾಗೂ ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆಯು ನೆರೆವೇರಿತು ನಂತರ ಅಭಿಷೇಕ ಪೂಜೆ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆಯು ನಡೆಯಿತು.

ಈ ವೇಳೆ ವನದುರ್ಗಾ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಶ್ರೀರಂಗ ದಾಮ್ಲೆ ಅರಸಿನಮಕ್ಕಿ, ಅರ್ಚಕ ಉಲ್ಲಾಸ್ ಭಟ್, ಆಡಳಿತ ಸಮಿತಿಯ ಅಧ್ಯಕ್ಷ ಪದ್ಮಯ್ಯ ಬಾರಿಗ, ಧ. ಗ್ರಾ, ಯೋಜನೆಯ ಶಶಿಕಲಾ ಹಾಗೂ ಸೇವಾ ಪ್ರತಿನಿಧಿ ಯಮುನಾ, ಟ್ರಸ್ಟ್ ನ ಸದಸ್ಯರು, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!