ಪೆರ್ಮಾಣುವಿನ ಭ। ಶ್ರೀ 1008 ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕೆ ಕಾರ್ಕಳದ ಶ್ರೀಗಳ ಆರ್ಶೀವಾದ ಹಾಗೂ ಮಾರ್ಗದರ್ಶನ

Suddi Udaya

ಬೆಳ್ತಂಗಡಿ: ನಡ ಗ್ರಾಮದ ಪೆರ್ಮಾಣುವಿನ ಭ। ಶ್ರೀ 1008 ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕೆ ಅ. 05 ರಂದು ಕಾರ್ಕಳ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಬಸದಿಯ ಆಡಳಿತ ಮೊತ್ತೇಸರರಾದ ಧನಂಜಯ ಅಜ್ರ ‘ನಡಗುತ್ತು’, ಮೂಡಬೆಟ್ಟು ರಾಜಶೇಖರ ಅಜ್ರಿ, ಮೂಡಬೆಟ್ಟು ಅನಂತರಾಜ್ ಜೈನ್, ಲಾಯಿಲ ಗುತ್ತು ಚಿತ್ತರಂಜನ್ ಹೆಗ್ಡೆ, ಹೊಕ್ಕಿಲ ಗುತ್ತು ಅರುಣ್ ಕುಮಾರ್ ಜೈನ್, ಪವನಂಜಯ ನಡ, ‘ಕೆಳಗಿನ ಸುರ್ಯ’ ಶಶಿಕಿರಣ್ ಜೈನ್, ಪವನಂಜಯ ಪೆರ್ಮಾಣು, ನಡಗುತ್ತು ಅನಿಶ್, ಪುರೋಹಿತರಾದ ಧರಣೇಂದ್ರ ಇಂದ್ರ, ಒಳಬೈಲು ನೇಮಿರಾಜ ಆರಿಗ, ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ, ಮತ್ತಿತರರು ಉಪಸ್ಥಿತರಿದ್ದರು. ಈ ಎಲ್ಲಾ ಸದಸ್ಯರು ಮಠದಲ್ಲಿ ಪೂಜೆ ಸಲ್ಲಿಸಿ, ಸ್ವಾಮೀಜಿಯವರ ಆಶೀರ್ವಾದ ಪಡೆದರು.

Leave a Comment

error: Content is protected !!