ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ನಾನು ಬದುಕಬೇಕು ಇನ್ನೊಬ್ಬರನ್ನೂ ಬದುಕಲು ಬಿಡಬೇಕು”: ಅಶ್ವಿನಿ ಎಸ್ ಶೆಟ್ಟಿ

ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮವಾದ “ದುಶ್ಚಟಗಳ ವಿರುದ್ಧ ಸ್ವರಕ್ಷಣಾ ಮಾರ್ಗೋಪಾಯಗಳು” ಎಂಬ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನೋವಿಜ್ಞಾನ ಸ್ನಾತಕೋತ್ತರ ಪದವಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಎಸ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ, ‘ನಾವು ಅದೆಷ್ಟೋ ಸಲ ದುಶ್ಚಟಗಳಿಗೆ ನಮಗೆ ತಿಳಿಯದೆಯೇ ಬಲಿಯಾಗುತ್ತಿದ್ದೇವೆ. ನಮ್ಮ ಮೇಲೆ ನಾವೇ ನಂಬಿಕೆ ಇಡುವುದರಿಂದ ನಮ್ಮನ್ನು ನಾವು ಪ್ರೀತಿಸುವುದರಿಂದ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಆದುದರಿಂದ ನಮ್ಮನ್ನು ನಾವೇ ಅರಿತುಕೊಂಡು ಬಾಳಬೇಕು’ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಡುಮಡ್ಕ ಅನ್ನಪೂರ್ಣೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೆಸರ ರಾಘವ ಗೌಡ ಕುಡುಮಡ್ಕ ವಹಿಸಿದ್ದರು.

ಅತಿಥಿಗಳಾಗಿ ಕೃಷ್ಣಪ್ಪ ಗೌಡ ಹಿರ್ತಡ್ಕ ಇವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸೋಮನಾಥ ಗೌಡ ಮಾಕಳ, ಅಧ್ಯಕ್ಷರು ಶಿಬಿರ ನಿರ್ವಹಣಾ ಸಮಿತಿ, ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸುಭಾಷ್ ಚಂದ್ರ ಜೈನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರಾರ್ಥಿ ಲತೇಶ್ ನಿರ್ವಹಿಸಿದರು. ಉಪನ್ಯಾಸಕರಾದ ಸುಭಾಷ್ ಚಂದ್ರ ಜೈನ್ ಸ್ವಾಗತಿಸಿ, ರೋಷನ್ ಧನ್ಯವಾದವಿತ್ತರು.

Leave a Comment

error: Content is protected !!