ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

Suddi Udaya

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಅ.10ರಂದು ಶುಭಾರಂಭಗೊಂಡಿತು. ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸೆಕ್ಟರ್ ಕಿಶೋರ್ ಪಿ. ಉದ್ಘಾಟಿಸಿ ಶುಭ ಹಾರೈಸಿದರು.

ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಮಾಲಕರ ಮಾತ- ಪಿತರಾದ ಶ್ರೀಮತಿ ವಸಂತಿ ಮತ್ತು ಮೋನಪ್ಪ ಪೂಜಾರಿ ಧರ್ಮಸ್ಥಳ, ಇನ್ನಿತರ ಗಣ್ಯರು, ಗ್ರಾಹಕರು ಹಾಜರಿದ್ದು ಶುಭ ಕೋರಿದರು.

ಮಾಲಕ ರಶ್ಮಿ, ಸಂತೋಷ್ ಧರ್ಮಸ್ಥಳ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಮಳಿಗೆಯಲ್ಲಿ ಮಂಗಳೂರಿನ ಪ್ರತಿಷ್ಟಿತ ಕ್ಯಾಂಪೋ ಉತ್ಪನ್ನದ ಗಾಣದ ಶುದ್ಧ ಕೊಬ್ಬರಿ ಎಣ್ಣೆ, ಶೇ.100 ಆದಿವಾಸಿ ಹೇರ್ ಆಯಿಲ್, ಮಲ್ನಾಡ್ ಚಾಹುಡಿ, ಕಾಫಿ ಪುಡಿ, ಶುದ್ಧ ಜೇನುತುಪ್ಪ, ನಾಟಿ ಹಸುವಿನ ತುಪ್ಪ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ, ಕೂರ್ಗ್ ಸೈಸಸ್, ಮಿಲೆಟ್ಸ್ ಐಸ್‌ಕ್ರೀಮ್, ಸ್ಪೆಷಲ್ ಚಾಕಲೇಟ್ಸ್, ಡ್ರೈ ಫುಟ್ಸ್, ಫ್ಲವರ್ಸ್ ಹಾಗೂ ಇತರ ಸಾವಯವ ಉತ್ಪನ್ನಗಳು ಸಿಗಲಿದೆ.

ಸಮಾರಂಭಗಳಿಗೆ ಸಭಾಂಗಣ, ಶಾಮಿಯಾನ, ಕ್ಯಾಟರಿಂಗ್, ಟ್ರಾವೆಲ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಲಕ ಸಂತೋಷ್ ಧರ್ಮಸ್ಥಳ ತಿಳಿಸಿದರು.

Leave a Comment

error: Content is protected !!