ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮ

Suddi Udaya

ಮುಂಡಾಜೆ: ಇಲ್ಲಿಯ ಮಂಜುಶ್ರೀ ನಗರ ಮಂಜುಶ್ರೀ ಭಜನಾ ಮಂದಿರ ಇದರ ಜೀರ್ಣೋದ್ದಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.11 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೀರೇಶ್ ಹೀರೇಮಠ ಬಾಗಲಕೋಟೆ, ಕಜೆ ವೆಂಕಟೇಶ್ವರ ಭಟ್, ಎಂ.ಎಸ್ ವರ್ಮ ಪರಮುಖ, ಅಗರಿ ರಾಮಣ್ಣ ಶೆಟ್ಟಿ ಭಾಗವಹಿಸಿದ್ದರು.

ಭಜನಾ ಮಂದಿರದ ಉಪಾಧ್ಯಕ್ಷ ಚೆನ್ನಕೇಶವ ನಾಯ್ಕ ಅರಸಮಜಲು ಸ್ವಾಗತಿಸಿದರು. ಸದಾನಂದ ಬಿ. ಪರಮುಖ ಹಾಗೂ ಶ್ರೀಮತಿ ಗೀತಾ ಉಮೇಶ್ ಆಚಾರ್ಯ ನಿರೂಪಿಸಿದರು. ಉಮೇಶ್ ಆಚಾರ್ಯ ಕಾನರ್ಪ ಧನ್ಯವಾದವಿತ್ತರು.

Leave a Comment

error: Content is protected !!