ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ 552 ನೇ ಸೇವಾ ಯೋಜನೆ ಹಸ್ತಾಂತರ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಆಸರೆಯಾದ ರಾಜ ಕೇಸರಿ

Suddi Udaya


ಬೆಳ್ತಂಗಡಿ: ಸದಾ ನಿರಂತರವಾಗಿ ಸಾಮಾಜಿಕ, ಆರೋಗ್ಯ. ಸೇವಾ ಯೋಜನೆಗಳೊಂದಿಗೆ ಹೆಸರುವಾಸಿಯಾಗಿರುವ ಸದಾ ಸಮಾಜದೊಂದಿಗೆ ಬೆರೆತು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವ ಏಕೈಕ ಸಂಘಟನೆಯಾದ ರಾಜಕೇಸರಿ ವತಿಯಿಂದ ಇಳಂತಿಲ ಪಾರಡ್ಕ ನಿವಾಸಿಯಾದ ಪದ್ಮನಾಭ ಕುಂಬಾರ ಎಂಬವರು 15 ವರ್ಷದಿಂದ ಬೆನ್ನುಮೂಳೆ ಮುರಿತದಿಂದ ಬಳಲಿತ್ತಿದ್ದು ಇವರಿಗೆ ವೀಲ್ ಚೆರ್ ಹಸ್ತಾಂತರ ನಡೆಯಿತು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ರಾಜ ಕೇಸರಿ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ, ವಿಪುಲ್ ಪೂಜಾರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗ್ರಾಮ ಪಂಚಾಯತ್ ಉಜಿರೆ, ಇಳಂತಿಲ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ರಾಧಿಕ
ಉಪಸ್ಥಿತರಿದ್ದರು.

Leave a Comment

error: Content is protected !!