September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

ಬೆಳ್ತಂಗಡಿ : ಯುಗಾದಿ ನವ ಪಲ್ಲವಕೆ ನಾಂದಿ ತಂಡದಿಂದ ಅ.20 ರಂದು ಧರ್ಮಸ್ಥಳದ ಗ್ರಾ.ಪಂ ಸಮುದಾಯ ಭವನ (ನೇತ್ರಾವತಿ ಸಭಾಂಗಣ)ದಲ್ಲಿ ಸ್ನೇಹಕೂಟ ನಡೆಯಲಿರುವುದು.

ಸ್ನೇಹಕೂಟದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯ ಕುಮಾರ್ ಜೈನ್ ಅಳದಂಗಡಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿಗಳಾದ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪಸ್ಥಿತಿ ಹಿರಿಯ ಸಾಹಿತಿಗಳಾದ ಪೆರ್ಮುಖ ಸುಬ್ರಹ್ಮಣ್ಯ ಭಟ್, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀಮತಿ ಕಲಾವತಿ ಪ್ರಕಾಶ್, ಶರಣ ಬಸಪ್ಪ ಕುಂಬಾರ್,ಶ್ರೀಮತಿ ಡಾ.ಶ್ವೇತಾ ಪ್ರಕಾಶ್, ಹೆಚ್.ಡಿ.ದಿವಾಕರ್, ಭಾಗವಹಿಸಲಿದ್ದಾರೆ.

ಶ್ರೀಮತಿ ಜ್ಞಾನೇಶ್ವರಿ ಉಡುಪ ಮತ್ತು ಶ್ರೀಮತಿ ಸೌಮ್ಯ ಗುರು ಕಾರ್ಲೆ ಯುಗಾದಿ ಧ್ಯೇಯ ಗೀತೆ ಗಾಯನ ಮಾಡಲಿದ್ದಾರೆ.


ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಮಾರಂಭದ ವ್ಯವಸ್ಥಾಪಕರಾದ
ಬೆಳ್ತಂಗಡಿ ತಾಲೂಕಿನ ಆಶಾ ಅಡೂರ್, ಶ್ರೀಮತಿ ಶ್ರೀಲತಾ ಭಾರ್ಗವ,ಶ್ರೀಮತಿ ವೀಣಾ ಉಮೇಶ್,ಶ್ರೀಮತಿ ಸುಜಾತ ಭಟ್, ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಲಿದ್ದಾರೆ. ಆಡಳಿತ ಮಂಡಳಿಯ ಎಂದು ಯುಗಾದಿ ನವ ಪಲ್ಲವಕೆ ನಾಂದಿ ಆಡಳಿತ ಮಂಡಳಿಯ ಶ್ರೀನಾಗ್ ಪಿ.ಎಸ್.ಹೊನ್ನಾವರ ತಿಳಿಸಿದ್ದಾರೆ.

Related posts

ಮಾಂಡೋವಿ ಮೋಟಾರ್ಸ್ ನಿಂದ ರಾಷ್ಟ್ರೀಯ ಕಬಡ್ಡಿ ಆಟಗಾರ ಹಕೀಂ ರವರಿಗೆ ಸನ್ಮಾನ

Suddi Udaya

ಲಾಯಿಲ: ಕನ್ನಾಜೆ ನಿವಾಸಿ ರಾಜು ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಇಂಡಸ್ ಟವರ್ಸ್ ಕಾರ್ಮಿಕರ ಶಾಂತಿಯುತ ಪ್ರತಿಭಟನೆಗೆ ದ.ಕ. ಜಿಲ್ಲಾ ಬಿಎಂಎಸ್ ಘಟಕದಿಂದ ಬೆಂಬಲ

Suddi Udaya

ಸ್ತ್ರೀ ಸಂಘಟನೆ ಬೆಳ್ತಂಗಡಿ ಘಟಕ ವತಿಯಿಂದ ಪರಿಸರ ಸ್ವಚತಾ ಆಂದೋಲನ

Suddi Udaya

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಆಟಿಡೊಂಜಿ ದಿನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು: ಯಕ್ಷಗಾನ, ದೈವರಾಧನೆ, ನಾಟಕ, ನಾಟಿ ವ್ಯೆದ್ಯಕೀಯ, ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ

Suddi Udaya
error: Content is protected !!