22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

ಬೆಳ್ತಂಗಡಿ : ಯುಗಾದಿ ನವ ಪಲ್ಲವಕೆ ನಾಂದಿ ತಂಡದಿಂದ ಅ.20 ರಂದು ಧರ್ಮಸ್ಥಳದ ಗ್ರಾ.ಪಂ ಸಮುದಾಯ ಭವನ (ನೇತ್ರಾವತಿ ಸಭಾಂಗಣ)ದಲ್ಲಿ ಸ್ನೇಹಕೂಟ ನಡೆಯಲಿರುವುದು.

ಸ್ನೇಹಕೂಟದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯ ಕುಮಾರ್ ಜೈನ್ ಅಳದಂಗಡಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿಗಳಾದ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪಸ್ಥಿತಿ ಹಿರಿಯ ಸಾಹಿತಿಗಳಾದ ಪೆರ್ಮುಖ ಸುಬ್ರಹ್ಮಣ್ಯ ಭಟ್, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀಮತಿ ಕಲಾವತಿ ಪ್ರಕಾಶ್, ಶರಣ ಬಸಪ್ಪ ಕುಂಬಾರ್,ಶ್ರೀಮತಿ ಡಾ.ಶ್ವೇತಾ ಪ್ರಕಾಶ್, ಹೆಚ್.ಡಿ.ದಿವಾಕರ್, ಭಾಗವಹಿಸಲಿದ್ದಾರೆ.

ಶ್ರೀಮತಿ ಜ್ಞಾನೇಶ್ವರಿ ಉಡುಪ ಮತ್ತು ಶ್ರೀಮತಿ ಸೌಮ್ಯ ಗುರು ಕಾರ್ಲೆ ಯುಗಾದಿ ಧ್ಯೇಯ ಗೀತೆ ಗಾಯನ ಮಾಡಲಿದ್ದಾರೆ.


ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಮಾರಂಭದ ವ್ಯವಸ್ಥಾಪಕರಾದ
ಬೆಳ್ತಂಗಡಿ ತಾಲೂಕಿನ ಆಶಾ ಅಡೂರ್, ಶ್ರೀಮತಿ ಶ್ರೀಲತಾ ಭಾರ್ಗವ,ಶ್ರೀಮತಿ ವೀಣಾ ಉಮೇಶ್,ಶ್ರೀಮತಿ ಸುಜಾತ ಭಟ್, ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಲಿದ್ದಾರೆ. ಆಡಳಿತ ಮಂಡಳಿಯ ಎಂದು ಯುಗಾದಿ ನವ ಪಲ್ಲವಕೆ ನಾಂದಿ ಆಡಳಿತ ಮಂಡಳಿಯ ಶ್ರೀನಾಗ್ ಪಿ.ಎಸ್.ಹೊನ್ನಾವರ ತಿಳಿಸಿದ್ದಾರೆ.

Related posts

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣ: 9 ನೇ ಗುರುತಿನಲ್ಲಿ ಪತ್ತೆಯಾಗದ ಕಳೇಬರದ ಅವಶೇಷ

Suddi Udaya

ಕೊಕ್ಕಡ: ಕೆಸರ್ದ ಕಂಡೊಡು ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸಿಯೋನ್ ಆಶ್ರಮದಲ್ಲಿ ಉಚಿತ ಶ್ರವಣದೋಷ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ “ಹೆಜ್ಜೆಗುರುತು” ವಿಶೇಷ ಕಾರ್ಯಕ್ರಮ

Suddi Udaya

ಶಿಬಾಜೆ: ಪೆರ್ಲ ಭಜನಾ ಮಂಡಳಿಯ ವತಿಯಿಂದ ರಸ್ತೆಯ ಬದಿಯ ಸ್ಚಚ್ಛತಾ ಕಾರ್ಯ

Suddi Udaya
error: Content is protected !!