April 2, 2025
Uncategorized

ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ದಿನಾಚರಣೆ

ಉಜಿರೆ :ಅಂತರ್ರಾಷ್ಟ್ರೀಯ ಸೀನಿಯರ್ ಛೇoಬರ್ ದಿನಾಚರಣೆ ಇದರ ಸಂಭ್ರಮಾಚಣೆಯ ಅಂಗವಾಗಿ ಚಿತ್ರಕಲೆಗೆ ತಮ್ಮ ಜೀವನವನ್ನುಆಮೂಡಿಪಾಗಿಟ್ಟ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ವಿಜೇತರಾದ ನಮ್ಮೂರ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಇದರ ಚಿತ್ರಕಲಾ ಶಿಕ್ಷಕರಾದ ಶ್ರೀ ವಿಶ್ವನಾಥ ಕೆ, ವಿಟ್ಲ (ವಿ. ಕೆ. ವಿಟ್ಲ) ಇವರನ್ನು ಅ18ರಂದು ಮನೆಯಲ್ಲಿಯೇ ಬೆಳ್ತಂಗಡಿ ಸೀನಿಯರ್ ಛೇoಬರ್ ಇದರ ಪರವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ವಾಲ್ಟರ್ ಸಿಕ್ವೇರಾ, ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ, ಸ್ಥಾಪಕಾಧ್ಯಕ್ಷರಾದ ಪ್ರಮೋದ್ ಆರ್ ನಾಯಕ್, ಪೂರ್ವಧ್ಯಕ್ಷರಾದ ಲ್ಯಾನ್ಸಿ ಪಿರೇರಾ, ವಿಶ್ವನಾಥ ಶೆಟ್ಟಿ, ಸದಸ್ಯರಾದ ವಿಲ್ಸನ್ ಗೊನ್ಸಾಲ್ವಿಸ್, Snr ದಯಾನಂದ ಕೆ, ಭರತ್ ಕುಮಾರ್, ಕಿರಣ್ ಕುಮಾರ್ ಹಾಗೂ ರಾಧಾಕೃಷ್ಣ ಕೆ ಇವರು ಹಾಜರಿದ್ದರು.


ಲ್ಯಾನ್ಸಿ ಪಿರೇರಾರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ.ಪ್ರಮೋದ್ ಆರ್ ನಾಯಕ್’ರವರು ಅಂತರ್ರಾಷ್ಟ್ರೀಯ ಸೀನಿಯರ್ ಛೇoಬರ್ ದಿನಾಚರಣೆಯ ವಿಶೇಷತೆಯನ್ನು ತಿಳಿಸಿದರು ಹಾಗೂ ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜರವರು ಧನ್ಯವಿತ್ತರು

Related posts

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

Suddi Udaya

ವಾಣಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ, ಉಪಾಧ್ಯಕ್ಷರಾಗಿ ಲೋಕನಾಥ್ ಶೆಟ್ಟಿ ಆಯ್ಕೆ

Suddi Udaya

ಸೋಣಂದೂರು: ಕೊಲ್ಪದಬೈಲು ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಭಾರೀ ಮಳೆಗೆ ಕೊಚ್ಚಿಕೊಂಡು ಹೋದ ದನ: ಹೋಮ್ ಗಾರ್ಡ್ ಸಿಬ್ಬಂದಿ ದಿನೇಶ್ ರವರಿಂದ ರಕ್ಷಣೆ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya
error: Content is protected !!