26.3 C
ಪುತ್ತೂರು, ಬೆಳ್ತಂಗಡಿ
May 18, 2025
ತಾಲೂಕು ಸುದ್ದಿ

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

ಬೆಳ್ತಂಗಡಿ; ಹಿರಿಯ ಸಾಮಾಜಿಕ ಜನಪರ ಸಂಘಟನೆಯಾದ ಜಮೀಯುಲ್ ಫಲಾಹ್ ಇದರ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಮಾಲಾಡಿ ಗ್ರಾಮದ
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕೊಲ್ಪೆದಬೈಲು ಅವರಿಗೆ ಯುಎಇ ಸರ್ಕಾರವು 10 ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವ ತೋರಿದೆ.

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಅತ್ಯುತ್ತಮ ಸಂಘಟಕರಾಗಿ, ಕೊಡುಗೈ ದಾನಿಯಾಗಿ ಹಲವು ಸಾಮಾಜಿಕ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಶಿಕ್ಷಣ, ಮಕ್ಕಳ ಕಲ್ಯಾಣ ಹಾಗೂ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರವಾಗಿ ಶ್ರಮ ಸೇವೆ ನೀಡಿದ್ದಾರೆ.
ಅವರ ಈ ಸಾಧನೆ ಹಾಗೂ ಸೇವಾ ಕಾರ್ಯಗಳನ್ನು ಗುರುತಿಸಿ ಯುಎಇ ಸರಕಾರ ಅವರಿಗೆ ಈ ಮಾನ್ಯತೆ ನೀಡಿ ಪುರಸ್ಕರಿಸಿದೆ.

ಈ ಗೌರವಾನ್ವಿತ ಗೋಲ್ಡನ್ ವೀಸಾವನ್ನು ಪ್ರಮುಖ ಹೂಡಿಕೆದಾರರು, ಶ್ರೇಷ್ಠ ಉದ್ಯಮಿಗಳು, ಪರಿಣತ ವೃತ್ತಿಪರರು, ವಿಜ್ಞಾನಿಗಳು, ಸಂಶೋಧಕರು ಮತ್ತು ಮಾನವೀಯ ಕಾರ್ಯಗಳಿಗೆ ತೊಡಗಿರುವವರನ್ನು ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ.
ಯುಎಇ ನಲ್ಲಿ ಸುಧೀರ್ಘ ವಾಸದ ಸೌಲಭ್ಯಗಳನ್ನೂ ಒಳಗೊಂಡ ಈ ವೀಸಾವನ್ನು ನಿರ್ದಿಷ್ಟ ಅರ್ಹತೆಯ ವ್ಯಕ್ತಿಗಳು ಮಾತ್ರ ಪಡೆದುಕೊಳ್ಳುವ ವಿಶಿಷ್ಟ ಗೌರವವೆಂದು ಪರಿಗಣಿಸಲಾಗಿದೆ.

Related posts

ಜ.9: ವಿದ್ಯುತ್ ನಿಲುಗಡೆ

Suddi Udaya

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ಗರ್ಡಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣಕ್ಕೆ ಹಾಗೂ ಬಂಗಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರಕ್ಕೆ ರೂ. 95.58 ಲಕ್ಷ ಸರಕಾರದಿಂದ ಅನುದಾನ ಬಿಡುಗಡೆ

Suddi Udaya

ಬೆಳ್ತಂಗಡಿಯ ಮಾಚಾರ್ ನ ಶಿವರಾಮ ಗೌಡ ಪಿ. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya

ಉಪ ನಿರೀಕ್ಷಕರಾಗಿ ಭಡ್ತಿಗೊಂಡ ದೇವಪ್ಪ ಎಂ ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕಾರ

Suddi Udaya
error: Content is protected !!