30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿ

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

ಕಳಿಯ ಗ್ರಾಮದ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಇಂದು ಸಂಜೆ ಅಂದಾಜು ಸುಮಾರು 3 ಗಂಟೆಗಳ ಸಮಯದಲ್ಲಿ ಇಬ್ಬರು ಅಪರಿಚಿತ ಯುವಕರ ಅನುಮಾನಾಸ್ಪದ
ವತಿ೯ನೆ ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.

ಪತ್ರಕತ೯ ಕೆ.ಎನ್ ಗೌಡ ಅವರು ಬೈಕ್ ನಿಲ್ಲಿಸಿ ಯುವಕರಲ್ಲಿ ವಿಚಾರಿಸುತ್ತಿದಂತೆ ಕುಪ್ಪೆಟಿ ಮೂಲದವರು ಎಂದು ಹೇಳಿ ಬೈಕ್ ಚಲಾಯಿಸಿ ಕೊಂಡು ಪರಾರಿಯಾಗಿದ್ದಾರೆ. ಬೈಕ್ ನಂಬರ್‌ ಪ್ಲೇಟ್ ತಿರುಗ,ಮುರಗ ಹಾಕಿ ಕೊಂಡಿರುವುದು ಕಂಡು ಬಂದಿದೆ . ಈ ಇಬ್ಬರು (20-22 ವರ್ಷಗಳ ಆಸುಪಾಸು) ಯುವಕರು ಸಂಶಯಾಸ್ಪದ ವ್ಯಕ್ತಿಗಳಾಗಿ ಕಂಡು ಬಂದಿದ್ದು ,ಕಳಿಯ ಪಂಚಾಯತ್ ಹಾಗೂ ಆರಕ್ಷಕ

ಠಾಣೆಯವರು ಮತ್ತು ಸ್ಥಳೀಯರು ಗಮನಹರಿಸಬೇಕಾಗಿದೆ.
ಕಳೆದ 15 ದಿನಗಳ ಹಿಂದೆ ಅಪರಿಚಿತ ವ್ಯಕ್ತಿ ಮಂಜಲಡ್ಕ ದೈವಸ್ಥಾನದ ವಠಾರದ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದಿರುವ ಬಗ್ಗೆ ಸ್ಥಳೀಯ ವಾಟ್ಸಾಫ್ ಗ್ರೂಪ್ ನಲ್ಲಿ ವೈರಲ್ ಆಗಿತ್ತು. ಗೇರುಕಟ್ಟೆಯಿಂದ ಪರಪ್ಪು- ಕೊಯ್ಯೂರು ರಸ್ತೆಯ ಸುಲಭ ಸಂಪರ್ಕ ರಸ್ತೆಯಾಗಿದೆ.ಇದರಲ್ಲಿ ನೂರಾರು ಪ್ರಾಥಮಿಕ ಶಾಲಾ, ಪ್ರೌಢಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳು,ಮಹಿಳೆಯರು ಮತ್ತು ಸಾರ್ವಜನಿಕರು ಓಡುವ ರಸ್ತೆಯಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತ ನಡೆಯುವ ಮೊದಲು ಎಚ್ಚೆತ್ತು ಕೊಳ್ಳುವುದು ಸೂಕ್ತ ವೆಂದು ನಿರೀಕ್ಷಿಸಲಾಗಿದೆ.

Related posts

ಗುಂಡೂರಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದಿ| ನಂದಕುಮಾರ್ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ನೀತಿ ಸಂಹಿತೆ ಜಾರಿ: ಸೆ.21-25 ರೊಳಗೆ ಮಹಾಸಭೆ ನಡೆಸುವವರು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವಂತೆ ವಿನಂತಿ

Suddi Udaya

ಭಾರೀ ಮಳೆಗೆ: ಮದ್ದಡ್ಕ-ಪಡಂಗಡಿ ಕುದ್ರೆಂಜ ಸಮೀಪ ತೋಟಕ್ಕೆ ನುಗ್ಗಿದ್ದ ನೀರು

Suddi Udaya
error: Content is protected !!