25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿ

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

ಕಳಿಯ ಗ್ರಾಮದ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಇಂದು ಸಂಜೆ ಅಂದಾಜು ಸುಮಾರು 3 ಗಂಟೆಗಳ ಸಮಯದಲ್ಲಿ ಇಬ್ಬರು ಅಪರಿಚಿತ ಯುವಕರ ಅನುಮಾನಾಸ್ಪದ
ವತಿ೯ನೆ ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.

ಪತ್ರಕತ೯ ಕೆ.ಎನ್ ಗೌಡ ಅವರು ಬೈಕ್ ನಿಲ್ಲಿಸಿ ಯುವಕರಲ್ಲಿ ವಿಚಾರಿಸುತ್ತಿದಂತೆ ಕುಪ್ಪೆಟಿ ಮೂಲದವರು ಎಂದು ಹೇಳಿ ಬೈಕ್ ಚಲಾಯಿಸಿ ಕೊಂಡು ಪರಾರಿಯಾಗಿದ್ದಾರೆ. ಬೈಕ್ ನಂಬರ್‌ ಪ್ಲೇಟ್ ತಿರುಗ,ಮುರಗ ಹಾಕಿ ಕೊಂಡಿರುವುದು ಕಂಡು ಬಂದಿದೆ . ಈ ಇಬ್ಬರು (20-22 ವರ್ಷಗಳ ಆಸುಪಾಸು) ಯುವಕರು ಸಂಶಯಾಸ್ಪದ ವ್ಯಕ್ತಿಗಳಾಗಿ ಕಂಡು ಬಂದಿದ್ದು ,ಕಳಿಯ ಪಂಚಾಯತ್ ಹಾಗೂ ಆರಕ್ಷಕ

ಠಾಣೆಯವರು ಮತ್ತು ಸ್ಥಳೀಯರು ಗಮನಹರಿಸಬೇಕಾಗಿದೆ.
ಕಳೆದ 15 ದಿನಗಳ ಹಿಂದೆ ಅಪರಿಚಿತ ವ್ಯಕ್ತಿ ಮಂಜಲಡ್ಕ ದೈವಸ್ಥಾನದ ವಠಾರದ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದಿರುವ ಬಗ್ಗೆ ಸ್ಥಳೀಯ ವಾಟ್ಸಾಫ್ ಗ್ರೂಪ್ ನಲ್ಲಿ ವೈರಲ್ ಆಗಿತ್ತು. ಗೇರುಕಟ್ಟೆಯಿಂದ ಪರಪ್ಪು- ಕೊಯ್ಯೂರು ರಸ್ತೆಯ ಸುಲಭ ಸಂಪರ್ಕ ರಸ್ತೆಯಾಗಿದೆ.ಇದರಲ್ಲಿ ನೂರಾರು ಪ್ರಾಥಮಿಕ ಶಾಲಾ, ಪ್ರೌಢಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳು,ಮಹಿಳೆಯರು ಮತ್ತು ಸಾರ್ವಜನಿಕರು ಓಡುವ ರಸ್ತೆಯಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತ ನಡೆಯುವ ಮೊದಲು ಎಚ್ಚೆತ್ತು ಕೊಳ್ಳುವುದು ಸೂಕ್ತ ವೆಂದು ನಿರೀಕ್ಷಿಸಲಾಗಿದೆ.

Related posts

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ

Suddi Udaya

ಸಿನಿಮಾರಂಗದ ಸೇವೆ : ಜಿ. ಕೃಷ್ಣ ಬೆಳ್ತಂಗಡಿ ಇವರಿಗೆ “ಡಾ. ಲೀಲಾವತಿ ಪ್ರಶಸ್ತಿ”

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಸುಲ್ಕೇರಿ ಮಹಾಮಾಯಿ ದೇವಸ್ಥಾನಕ್ಕೆ ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಿಂದ ಚೆಂಡೆ, ದೀಪಾ, ಮತ್ತು ಕಹಳೆ ಸಮರ್ಪಣೆ

Suddi Udaya

ಕೆನರಾ ಬ್ಯಾಂಕ್ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆ

Suddi Udaya
error: Content is protected !!