July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಶ್ರೀ ಧ.ಮಂ. ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಕಾರ್ಯಕ್ರಮ

ಉಜಿರೆ ಶ್ರೀ ಧ.ಮಂ. ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಕಾರ್ಯಕ್ರಮವು ನ. 08 ರಂದು ಕಿಲ್ಲೂರು ಶಾಲೆಯಲ್ಲಿ ನಡೆಯಿತು.

ಗ್ರಾಮೀಣ ಆಟಗಳು ಗ್ರಾಮೀಣ ಕ್ರೀಡೆಗಳ ಬಗ್ಗೆ ಒಂದಷ್ಟು ಮಹತ್ವದ ಮಾಹಿತಿಯನ್ನು ನೀಡಿ ಗ್ರಾಮೀಣ ಕ್ರೀಡೆಗಳನ್ನು ನೆನಪು ಮಾಡುವ ಮೂಲಕ ಒಂದಷ್ಟು ಕ್ರೀಡೆಗಳನ್ನು ನಡೆಸಿ, ಇಂದಿನ ಆಟಗಳ ಬಗ್ಗೆ ನೆನಪು ಮಾಡಲಾಯಿತು, ಗ್ರಾಮೀಣ ಕ್ರೀಡೆಗೆ ಆಸಕ್ತಿ ನೀಡುವಂತೆ, ಸಂಪನ್ಮೂಲ ವ್ಯಕ್ತಿಗಳಾದ ಮಹಾವೀರ ಜೈನ್ ಕನ್ನಡ ಭಾಷಾ ಉಪನ್ಯಾಸಕರು ಶ್ರೀ. ಧ.ಮo ಪ.ಪೂ ಕಾಲೇಜು ಉಜಿರೆ ಇವರು ಶಿಬಿರಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀಕ್ಷಿತ್ ಕೆ ಕಲ್ಬೆಟ್ಟು ತಾಲೂಕು ಸಂಯೋಜಕರು, ನೆಹರು ಯುವ ಕೇಂದ್ರ ಮಂಗಳೂರು.
ರಾಷ್ಟ್ರೀಯ ಸೇವಾ ಯೋಜನೆಯ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ತನ್ನನ್ನು ತಾನು ತೊಡಗಿಸಿಕೊಂಡು ಸಮಯ ಪಾಲನೆ ಹಾಗೂ ಶಿಸ್ತು ವೈಯಕ್ತಿಕ ವೃತ್ತಿ ಜೀವನ ಜೊತೆಗೆ ಸ್ವಲ್ಪ ಸಮಯವನ್ನು ರಾಷ್ಟ್ರೀಯ ಕಾರ್ಯದಲ್ಲಿ ಕೂಡ ಕೈಜೋಡಿಸುವoತೆ ಶಿಬಿರಾರ್ಥಿಗಳಿಗೆ ತಿಳಿಸಿದರು.

ಗ್ರಾಮೀಣ ಕ್ರೀಡಾಕೂಟದ ಭಿತ್ತಿಪತ್ರಿಕೆ ಅನಾವರಣ ಮೋಹನ ಕಿಲ್ಲೂರು ಇವರು ನೆರವೇರಿಸಿದರು. ಕಿಲ್ಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ , ಕಿಲ್ಲೂರು ಎಸ್ ಡಿ ಎಂ ಸಿ ಸದಸ್ಯರಾದ ಗಿರೀಶ್ ಗೌಡ ಜಾರಿಗೆ, ಚಂದ್ರಶೇಖರ ಮಾಲೂರು,
ಯೋಜನಾಧಿಕಾರಿಗಳಾದ ಡಾ. ಪ್ರಸನ್ನಕುಮಾರ್ ಐತಾಲ್ ಮತ್ತು ಸಹಯೋಜನಾಧಿಕಾರಿಗಳಾದ ಶ್ರೀಮತಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

Related posts

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕಾಜೂರು ಶಿಕ್ಷಣ ಸಂಸ್ಥೆಯಲ್ಲಿ “ಅಲೀಫ್ ಡೇ” ಸಮಾರಂಭ

Suddi Udaya

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

Suddi Udaya

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿಗೆ ಶೇ.98.31 ಫಲಿತಾಂಶ

Suddi Udaya

ಗುರುವಾಯನಕೆರೆ ಎಸ್‌ಡಿಟಿಯು ಆಟೋ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!