24.7 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

ಬೆಳ್ತಂಗಡಿ: ಮೂಡಬಿದ್ರೆಯ ಮಹಾವೀರ ಕಾಲೇಜಿನ ಇಂಟರ್ ಕಾಲೇಜ್ ಸೈನ್ಸ್ ಹಾಗೂ ಐಟಿ ಫೆಸ್ಟಿನಲ್ಲಿ ಮಾಜಿ ಶಾಸಕ ದಿ. ವಸಂತ ಬಂಗೇರರ ಸ್ಥಾಪಕತ್ವದ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆಯುವುದರ ಜೊತೆಗೆ ಸಮಗ್ರ ಚಾಂಪಿಯನ್ ಶಿಪ್ ಗೆ ಭಾಜನರಾಗಿದ್ದಾರೆ.

ವರ್ಕಿಂಗ್ ಮಾಡೆಲ್ ನಲ್ಲಿ ಗಿರೀಶ ಪ್ರಥಮ ಸ್ಥಾನ, ಮೇಡ್ ಆಡ್ ನಲ್ಲಿ ದೀಪಕ್ ಮತ್ತು ತಂಡ ಪ್ರಥಮ, ರೀಲ್ ಮೇಕಿಂಗ್ ಕಾಂಪಿಟೇಶನ್ ನಲ್ಲಿ ವಿಷ್ಣು ಪ್ರಥಮ, ಕ್ವಿಜ್ ಕಾಂಪಿಟೇಶನ್ ನಲ್ಲಿ ಸಿದ್ದಾರ್ಥ ಹಾಗೂ ರಂಜಿತ್ ಪ್ರಥಮ, ಪೋಸ್ಟರ್ ಮೇಕಿಂಗ್ ಕಾಂಪಿಟೇಶನ್ ನಲ್ಲಿ ಶ್ರೀನಿತ್ಯಾ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಭಾಗವಹಿಸಿದ 7 ಸ್ಪರ್ಧೆಗಳಲ್ಲಿ 5 ರಲ್ಲಿ ಬಹುಮಾನಗಳಿಸಿ ಸಮಗ್ರ ಚಾಂಪಿಯನ್ ಆಗಿ ಗುರುದೇವ ಕಾಲೇಜ್ ಹೊರಹೊಮ್ಮಿದೆ. ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಕಾಲೇಜಿನ ಗಣಕವಿಜ್ಞಾನ ಉಪನ್ಯಾಸಕಿ ಶುಭಲಕ್ಷ್ಮೀ, ಜೀವಶಾಸ್ತ್ರ ಉಪನ್ಯಾಸಕಿ ಭಾಗ್ಯಶ್ರೀ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ರೀ ಗುರುದೇವ ಕಾಲೇಜಿನ ಆಡಳಿತ ಸಮಿತಿ ಅಭಿನಂದಿಸಿದೆ.

Related posts

ಕುಂಟಿನಿ ಬೂತ್ ಸಮಿತಿ ಎಸ್.ಡಿ.ಪಿ.ಐ ವತಿಯಿಂದ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಚಾರ್ಮಾಡಿ ಘಾಟಿನಲ್ಲಿ ಭಾರಿ ಬೆಂಕಿ ಅವಘಡ

Suddi Udaya

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya

ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೆಸ್ಕಾಂ ನಿಗಮದ ನೂತನ ಅಧ್ಯಕ್ಷ ಕೆ ಹರೀಶ್ ಕುಮಾರ್ ಭೇಟಿ

Suddi Udaya

ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ಮಾ। ರಿತ್ವಿಕ್‌ರಾಜ್ ಅಂಡಿಂಜೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಓಟ್ ಚೋರ್ ಗದ್ದಿ ಚೋರ್ ಅಭಿಯಾನ ಹಾಗೂ ಮುಂಡಾಜೆ ಬೂತ್ ಪ್ರಗತಿ ಸಭೆ

Suddi Udaya
error: Content is protected !!