24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

ಬೆಳ್ತಂಗಡಿ: ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಹಾಗು ಅದರ ಆಧಾರವಾಗಿರುವ ಗಾಡ್ಗಿಲ್ ವರದಿಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಅಳವಡಿಸಲು ಅಧಿಕಾರಿಗಳು ವಿಫಲಾರಾಗಿದ್ದು, ಪರಿಣಾಮವಾಗಿ ಕೃಷಿ ಭೂಮಿಗಳನ್ನು ಅರಣ್ಯ ಎಂದು ತಪ್ಪಾಗಿ ಮಾಪನಮಾಡಿದ್ದಾರೆ. ಇದರ ಆತಂಕಗಳಿಂದ ಕೃಷಿಕರ, ರೈತರ ಭೂಮಿಯ ಮೇಲಿನ ತಮ್ಮ ಹಕ್ಕು ಸಂರಕ್ಷಣೆಗೆ ನಡೆಸುವ ಹೋರಾಟಕ್ಕೆ ಮಲೆನಾಡು ಸಂರಕ್ಷಣಾ ವೇದಿಕೆಗೆ ಸಾರ್ವಜನಿಕರು ಬೆಂಬಲ ನೀಡುವಂತೆ ತಿಳಿಸಿದ್ದಾರೆ.

ಮಲೆನಾಡಿನ ಜನತೆ ಎಚ್ಚೆತ್ತು, ಜಾತಿ, ಧರ್ಮ, ಪಂಗಡ, ಪಕ್ಷಗಳನ್ನು ಮರೆತು ಮಣ್ಣಿನ ಸಂರಕ್ಷಣೆಗೆ ಹೋರಾಟಕಿಳಿಯೋಣ. ಮಲೆನಾಡಿನ ಮಣ್ಣನ್ನು ಕೃಷಿರೀತಿಗಳನ್ನು ಸರಿಯಾಗಿ ತಿಳಿಯದೆ ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಈ ಹೋರಾಟವನ್ನು ಮುನ್ನಡೆಸೋಣ. ನ. 15 ರಂದು ಗುಂಡ್ಯದಲ್ಲಿ ನಡೆಯಲಿರುವ ಬ್ರಹತ್ ಸಮ್ಮೇಳನಕ್ಕೆ ಸಾರ್ವಜನಿಕರೆಲ್ಲರು ಭಾಗವಹಿಸಿ ನಮ್ಮ ಹಕ್ಕು ಸಂರಕ್ಷಣೆಗಾಗಿ ಹೋರಾಡೋಣ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯ ಮಾಧ್ಯಮ ನಿರ್ದೇಶಕ ಫಾ| ಸುನಿಲ್ ಐಸಕ್ ತಿಳಿಸಿದ್ದಾರೆ.

Related posts

ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ

Suddi Udaya

ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳ

Suddi Udaya

ಮಾ.8: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಯಿಂದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಪಡಂಗಡಿ : ಪೊಯ್ಯೆಗುಡ್ಡೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

Suddi Udaya

ಬೆಳ್ತಂಗಡಿ ನ್ಯಾಯವಾದಿ ಭಗೀರಥ ಜಿ ರವರ ನೋಟರಿ ಕಚೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!