July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ : ಶ್ರೀ ರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

ಕೊಕ್ಕಡ : ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀ ರಾಮ ಸೇವಾ ಮಂದಿರಕ್ಕೆ ಕಡಿಮೆ ಖರ್ಚು – ವೆಚ್ಚಗಳಲ್ಲಿ ಸುಸೂತ್ರವಾಗಿ ಸಭೆ – ಸಮಾರಂಭಗಳನ್ನು ನಡೆಯಲು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಅರಿತು ದಾನಿಗಳ ಬಳಿ ಮನವಿಯನ್ನು ಮಾಡಿದಾಗ ಸುಮಾರು 500 ಜನರಿಗೆ ಬೇಕಾಗುವ ರೂ. 1 ಲಕ್ಷ ಮೌಲ್ಯದ ಅಡುಗೆ ಮಾಡುವ ಪಾತ್ರೆಗಳನ್ನು ಪೂವಾಜೆ ಕುಟುಂಬದ ಸದಸ್ಯರು ಆದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಅದಾ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ನಿವೃತ್ತ ಅಧ್ಯಾಪಕರಾದ ಶ್ರೀಮತಿ ಮತ್ತು ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ ಇವರು ಶ್ರೀ ರಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸುತ್ತಾರೆ.

ಹಾಗೆಯೇ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಆದಾ ಕೊಡುಗೆಯನ್ನು ನೀಡುತ್ತಿರುವ ನಿವೃತ್ತ ಅಧ್ಯಾಪಕ ಬಜ ಶ್ರೀ ಗಣೇಶ್ ಐತಾಳ್ ಇವರು ದೊಡ್ಡ ಗ್ಯಾಸ್ ಸ್ಟವ್ ನ್ನು ನೀಡಿರುತ್ತಾರೆ, ಸಚಿನ್ ಸಾಲಿಯಾನ್ ವೈನ್ಸ್ ಇವರು ಬಾವಿಗೆ ರಕ್ಷಾ ಕವಚವನ್ನು ಒದಗಿಸಿರುತ್ತಾರೆ, ಮೆಸ್ಕಾಂ ಸಿಬ್ಬಂದಿಗಳು, ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಇಲ್ಲಿಯ ಸಿಬ್ಬಂದಿಗಳು ಊಟದ ತಟ್ಟೆಗಳನ್ನು, ಹಿಂದೂ ಶಕ್ತಿ ಆಟೋ ಚಾಲಕ – ಮಾಲಕರ ಸಂಘದ ವತಿಯಿಂದ ಗೊದ್ರೇಜ್, ಶ್ರೀನಾಥ್ ಬಡೆಕೈಲು ಪ್ರಕೃತಿ ಇಂಜಿನಿಯರಿಂಗ್ ವರ್ಕ್ಸ್‌ ಇವರು ಸಿಂಗಲ್ ಬರ್ನರ್ ಸ್ಟವ್ ನ್ನು, ಹೇಮಂತ್ ಕುಮಾರ್ ಶ್ರೀ ದುರ್ಗಾಪರಮೇಶ್ವರಿ ಫ್ಲವರ್ ಸ್ಟಾಲ್ ಕೊಕ್ಕಡ ಇವರು ಮಿಕ್ಸರ್ ಗ್ರೈಂಡರನ್ನು, ಅಶೋಕ್ ಭಿಡೆ ಪಾಕತಜ್ಞರು ಇವರು ಗ್ರೈಂಡರನ್ನು ನೀಡಿರುತ್ತಾರೆ ಹಾಗೂ ಕೆಲವು ವೈಯಕ್ತಿಕ ದಾನಿಗಳಿಂದ ಶ್ರೀ ರಾಮ ಸೇವಾ ಮಂದಿರಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿರುತ್ತಾರೆ.


ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಇವರು ಶ್ರೀ ದೇವರಲ್ಲಿ ಪ್ರಾರ್ಥಿಸಿ ದಾನಿಗಳು ನೀಡಿರುವ ವಸ್ತುಗಳನ್ನು ಶ್ರೀ ರಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಲಾಯಿತು.

ಈ ವೇಳೆ ದಾನಿಗಳಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.


ಈ ಸಂಧರ್ಭದಲ್ಲಿ ದಾನಿಗಳಾದ ಶ್ರೀಮತಿ ಮತ್ತು ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ ದಂಪತಿಗಳು, ಗಣೇಶ್ ಐತಾಳ್ ಬಜ, ಅಶೋಕ್ ಭಿಡೆ, ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ, ಈಶ್ವರ ಭಟ್ ಹಿತ್ತಿಲು, ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಟ್ರಸ್ಟ್ ನ ಕೋಶಾಧಿಕಾರಿ ಪಣಿರಾಜ್ ಜೈನ್ ಕೊಕ್ಕಡ, ವಿ.ಹಿಂ.ಪ ಅಧ್ಯಕ್ಷರಾದ ಪುರುಷೋತ್ತಮ ಕೆ ಕೊಕ್ಕಡ, ಡಾ. ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ಡಾ. ಮೋಹನ್ ದಾಸ್ ಗೌಡ ಹಿರಿಯ ವೈದ್ಯರು ಕೊಕ್ಕಡ, ಶಾಂತಪ್ಪ ಮಡಿವಾಳ ಕೊಕ್ಕಡ, ಪುರಂದರ ಕಡೀರ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್ ನ ಮತ್ತು ನಗರ ಭಜನಾ ಸಪ್ತಾಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಅ.23: ಬೆಳ್ತಂಗಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಉಜಿರೆಯ ಲಾಡ್ಜ್ ಗೆ ಪೊಲೀಸ್ ದಾಳಿ: ವೇಶ್ಯಾವಾಟಿಕೆ‌ ನಿರತರಾಗಿದ್ದ‌ಮೂವರ ಬಂಧನ

Suddi Udaya

ಕಕ್ಕಿಂಜೆ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಲ್ ಜಅ ದಅವಾ ಕೇಂದ್ರದಿಂದ ಒಂದು ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

Suddi Udaya

ಬೇಸಿಗೆ ರಜೆ ಮುಗಿಸಿ ವಿದ್ಯಾಕೇಂದ್ರಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು: ಬಜಿರೆ ಪಿ.ಎಂ.ಶ್ರೀ ಶಾಲಾ ಪ್ರಾರಂಭೋತ್ಸವ: ಶಾಲೆಯಲ್ಲಿ ಮಕ್ಕಳ ಕಲರವ-ಪಾಲಕರ ಸಂಭ್ರಮ

Suddi Udaya
error: Content is protected !!