ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಂಗಾಡಿ ಸ.ಪ್ರೌ. ಶಾಲೆಗೆ ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತ ಬಸವರಾಜ್ ಶಂಕರ್ ಉಮ್ರಾಣಿ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತರಾದ ಬಸವರಾಜ್ ಶಂಕರ್ ಉಮ್ರಾಣಿ ಇವರು ಡಿ17,ರಂದು ಗ್ರಾಮೀಣ ಶಾಲೆಯಾದ ಸರಕಾರಿ ಪ್ರೌಢಶಾಲೆ ಬಂಗಾಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ನಾವು ಕಷ್ಟಕರ ಎಂದು ಭಾವಿಸುವ ಗಣಿತ ವಿಷಯವನ್ನು ಸುಲಭವಾಗಿ ಇಷ್ಟಪಟ್ಟು ಕಲಿಯುವ ಹಾಗೆ ಪ್ರೇರಣೆ ನೀಡಿದರು.

ಹುಟ್ಟು ಕುರುಡರಾಗಿರುವ ಇವರು ಒಂಭತ್ತು ಅಂಕಿಗಳಿರುವ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನವನ್ನು ಕ್ಷಣಾರ್ಧದಲ್ಲಿ ಯಾವುದೇ ತಂತ್ರಂಶಾಗಳ ಸಹಾಯವಿಲ್ಲದೇ ಮಾನಸಿಕ ಸಾಮರ್ಥ್ಯದಿಂದ ಬಿಡಿಸಿ ಉತ್ತರಿಸಿದ ರೀತಿ ಮಕ್ಕಳನ್ನು ಬೆರಗುಗೊಳಿಸಿತ್ತು. ಜನ್ಮ ದಿನಾಂಕ ಕೇಳಿಸಿಕೊಂಡು ಹುಟ್ಟಿದ ವಾರ ಹೇಳುವ ರೀತಿ ಅವಿಸ್ಮರಣೀಯ. ಎರಡಂಕ್ಕಿ ಮತ್ತು ಮೂರಂಕಿಗಳ ಗುಣಾಕಾರ ಕೋಷ್ಠಕವನ್ನು ಸರಾಗವಾಗಿ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಹೇಳುವ ಸಾಮರ್ಥ್ಯ ಎಲ್ಲರನ್ನು ಮೋಡಿ ಮಾಡಿತ್ತು. ಶಾಲಾ ಶಿಕ್ಷಕರಲ್ಲಿ ಮೂವತ್ತು ಅಂಕಿಗಳನ್ನು ಕರಿಹಲಗೆಯ ಮೇಲೆ ಬರೆಯಿಸಿ ಆ ಅಂಕಿಗಳನ್ನು ಆಲಿಸಿ ತಮ್ಮ ಸ್ಮರಣಶಕ್ತಿಯಿಂದ ಕ್ರಮಬದ್ಧ ರೀತಿಯಲ್ಲಿ ಪ್ರಥಮ ಅಂಕಿಯಿಂದ ಮೂವತ್ತನೇ ಅಂಕಿಯವರೆಗೆ ಮತ್ತು ಮೂವತ್ತನೇ ಅಂಕಿಯಿಂದ ಪ್ರಥಮ ಅಂಕಿಯವರೆಗೆ ತಿರುಗ ಮುರುಗ ಹೇಳಿದ ರೀತಿ ಕೇಳಿಸಿಕೊಂಡ ಎಲ್ಲರೂ ಆಶ್ಚರ್ಯಚಕಿತರಾದರು.

ಮೂರಂಕಿ ಸಂಖ್ಯೆಗಳ ಘನಗಳನ್ನು ಮತ್ತು ವರ್ಗ ಸಂಖ್ಯೆಗಳನ್ನು ಯಾವುದೇ ತಂತ್ರಾಂಶಗಳ ಸಹಾಯವಿಲ್ಲದೆ ಕ್ಷಣಾ ಗಳಿಗೆಯಲ್ಲಿ ಹೇಳುತ್ತಿದ್ದ ಸಾಮರ್ಥ್ಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾದರಿಯಂತಿತ್ತು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಹಾಗೊ ಶ್ರೀಧರ ಗುಡಿಗಾರರ ಮುತುವರ್ಜಿಯಿಂದ ಕಾರ್ಯಕ್ರಮವು ಜರುಗಿತು.

ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದವಿತ್ತರು.

Related posts

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಭಜನಾ ತರಬೇತಿ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ವಿದ್ಯಾದಾನದ ಮೂಲಕ ಸಮಾಜಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ: ಎ. ವೀರು ಶೆಟ್ಟಿ

Suddi Udaya

ನಿವೃತ್ತ ಉಪತಹಶೀಲ್ದಾರ್, ಪ್ರಗತಿಪರ ಕೃಷಿಕ, ನಾಳ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗುಂಡೂರಾವ್ ವಿಧಿವಶ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಮಾ.31: ತಾ.ಪಂ. ವಿಷಯ ನಿರ್ವಾಹಕಿ ಮೊರ್ಲಿನ್ ಕ್ರಿಸ್ತಿನ್ ಡಿಸೋಜ ಸೇವಾ ನಿವೃತ್ತಿ

Suddi Udaya
error: Content is protected !!