23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಂಗಾಡಿ ಸ.ಪ್ರೌ. ಶಾಲೆಗೆ ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತ ಬಸವರಾಜ್ ಶಂಕರ್ ಉಮ್ರಾಣಿ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತರಾದ ಬಸವರಾಜ್ ಶಂಕರ್ ಉಮ್ರಾಣಿ ಇವರು ಡಿ17,ರಂದು ಗ್ರಾಮೀಣ ಶಾಲೆಯಾದ ಸರಕಾರಿ ಪ್ರೌಢಶಾಲೆ ಬಂಗಾಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ನಾವು ಕಷ್ಟಕರ ಎಂದು ಭಾವಿಸುವ ಗಣಿತ ವಿಷಯವನ್ನು ಸುಲಭವಾಗಿ ಇಷ್ಟಪಟ್ಟು ಕಲಿಯುವ ಹಾಗೆ ಪ್ರೇರಣೆ ನೀಡಿದರು.

ಹುಟ್ಟು ಕುರುಡರಾಗಿರುವ ಇವರು ಒಂಭತ್ತು ಅಂಕಿಗಳಿರುವ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನವನ್ನು ಕ್ಷಣಾರ್ಧದಲ್ಲಿ ಯಾವುದೇ ತಂತ್ರಂಶಾಗಳ ಸಹಾಯವಿಲ್ಲದೇ ಮಾನಸಿಕ ಸಾಮರ್ಥ್ಯದಿಂದ ಬಿಡಿಸಿ ಉತ್ತರಿಸಿದ ರೀತಿ ಮಕ್ಕಳನ್ನು ಬೆರಗುಗೊಳಿಸಿತ್ತು. ಜನ್ಮ ದಿನಾಂಕ ಕೇಳಿಸಿಕೊಂಡು ಹುಟ್ಟಿದ ವಾರ ಹೇಳುವ ರೀತಿ ಅವಿಸ್ಮರಣೀಯ. ಎರಡಂಕ್ಕಿ ಮತ್ತು ಮೂರಂಕಿಗಳ ಗುಣಾಕಾರ ಕೋಷ್ಠಕವನ್ನು ಸರಾಗವಾಗಿ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಹೇಳುವ ಸಾಮರ್ಥ್ಯ ಎಲ್ಲರನ್ನು ಮೋಡಿ ಮಾಡಿತ್ತು. ಶಾಲಾ ಶಿಕ್ಷಕರಲ್ಲಿ ಮೂವತ್ತು ಅಂಕಿಗಳನ್ನು ಕರಿಹಲಗೆಯ ಮೇಲೆ ಬರೆಯಿಸಿ ಆ ಅಂಕಿಗಳನ್ನು ಆಲಿಸಿ ತಮ್ಮ ಸ್ಮರಣಶಕ್ತಿಯಿಂದ ಕ್ರಮಬದ್ಧ ರೀತಿಯಲ್ಲಿ ಪ್ರಥಮ ಅಂಕಿಯಿಂದ ಮೂವತ್ತನೇ ಅಂಕಿಯವರೆಗೆ ಮತ್ತು ಮೂವತ್ತನೇ ಅಂಕಿಯಿಂದ ಪ್ರಥಮ ಅಂಕಿಯವರೆಗೆ ತಿರುಗ ಮುರುಗ ಹೇಳಿದ ರೀತಿ ಕೇಳಿಸಿಕೊಂಡ ಎಲ್ಲರೂ ಆಶ್ಚರ್ಯಚಕಿತರಾದರು.

ಮೂರಂಕಿ ಸಂಖ್ಯೆಗಳ ಘನಗಳನ್ನು ಮತ್ತು ವರ್ಗ ಸಂಖ್ಯೆಗಳನ್ನು ಯಾವುದೇ ತಂತ್ರಾಂಶಗಳ ಸಹಾಯವಿಲ್ಲದೆ ಕ್ಷಣಾ ಗಳಿಗೆಯಲ್ಲಿ ಹೇಳುತ್ತಿದ್ದ ಸಾಮರ್ಥ್ಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾದರಿಯಂತಿತ್ತು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಹಾಗೊ ಶ್ರೀಧರ ಗುಡಿಗಾರರ ಮುತುವರ್ಜಿಯಿಂದ ಕಾರ್ಯಕ್ರಮವು ಜರುಗಿತು.

ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದವಿತ್ತರು.

Related posts

ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಕುವೆಟ್ಟು ತುಳು ಶಿವಳ್ಳಿ ವಲಯದ ಸದಸ್ಯರಿಂದ ಭಜನಾ ಸೇವೆ

Suddi Udaya

ಲಾಯಿಲ : ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಬೆಂಬಲ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಸಂಭ್ರಮ: ಶಾಂತಿವನ ಟ್ರಸ್ಟ್ ನಿಂದ ಗೌರವಾರ್ಪಣೆ

Suddi Udaya

ಗ್ರಾಮ ಪಂಚಾಯತಿ ಕಲಿಕಾ ಕೇಂದ್ರಗಳ ಯಶೋಗಾಥೆಗಳ ದಾಖಲೀಕರಣ ಕುರಿತು ತರಬೇತಿ: ಉಜಿರೆ – ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಭಾಗಿ

Suddi Udaya

ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಉದ್ಘಾಟನೆ

Suddi Udaya
error: Content is protected !!