July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಂಗಾಡಿ ಸ.ಪ್ರೌ. ಶಾಲೆಗೆ ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತ ಬಸವರಾಜ್ ಶಂಕರ್ ಉಮ್ರಾಣಿ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತರಾದ ಬಸವರಾಜ್ ಶಂಕರ್ ಉಮ್ರಾಣಿ ಇವರು ಡಿ17,ರಂದು ಗ್ರಾಮೀಣ ಶಾಲೆಯಾದ ಸರಕಾರಿ ಪ್ರೌಢಶಾಲೆ ಬಂಗಾಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ನಾವು ಕಷ್ಟಕರ ಎಂದು ಭಾವಿಸುವ ಗಣಿತ ವಿಷಯವನ್ನು ಸುಲಭವಾಗಿ ಇಷ್ಟಪಟ್ಟು ಕಲಿಯುವ ಹಾಗೆ ಪ್ರೇರಣೆ ನೀಡಿದರು.

ಹುಟ್ಟು ಕುರುಡರಾಗಿರುವ ಇವರು ಒಂಭತ್ತು ಅಂಕಿಗಳಿರುವ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನವನ್ನು ಕ್ಷಣಾರ್ಧದಲ್ಲಿ ಯಾವುದೇ ತಂತ್ರಂಶಾಗಳ ಸಹಾಯವಿಲ್ಲದೇ ಮಾನಸಿಕ ಸಾಮರ್ಥ್ಯದಿಂದ ಬಿಡಿಸಿ ಉತ್ತರಿಸಿದ ರೀತಿ ಮಕ್ಕಳನ್ನು ಬೆರಗುಗೊಳಿಸಿತ್ತು. ಜನ್ಮ ದಿನಾಂಕ ಕೇಳಿಸಿಕೊಂಡು ಹುಟ್ಟಿದ ವಾರ ಹೇಳುವ ರೀತಿ ಅವಿಸ್ಮರಣೀಯ. ಎರಡಂಕ್ಕಿ ಮತ್ತು ಮೂರಂಕಿಗಳ ಗುಣಾಕಾರ ಕೋಷ್ಠಕವನ್ನು ಸರಾಗವಾಗಿ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಹೇಳುವ ಸಾಮರ್ಥ್ಯ ಎಲ್ಲರನ್ನು ಮೋಡಿ ಮಾಡಿತ್ತು. ಶಾಲಾ ಶಿಕ್ಷಕರಲ್ಲಿ ಮೂವತ್ತು ಅಂಕಿಗಳನ್ನು ಕರಿಹಲಗೆಯ ಮೇಲೆ ಬರೆಯಿಸಿ ಆ ಅಂಕಿಗಳನ್ನು ಆಲಿಸಿ ತಮ್ಮ ಸ್ಮರಣಶಕ್ತಿಯಿಂದ ಕ್ರಮಬದ್ಧ ರೀತಿಯಲ್ಲಿ ಪ್ರಥಮ ಅಂಕಿಯಿಂದ ಮೂವತ್ತನೇ ಅಂಕಿಯವರೆಗೆ ಮತ್ತು ಮೂವತ್ತನೇ ಅಂಕಿಯಿಂದ ಪ್ರಥಮ ಅಂಕಿಯವರೆಗೆ ತಿರುಗ ಮುರುಗ ಹೇಳಿದ ರೀತಿ ಕೇಳಿಸಿಕೊಂಡ ಎಲ್ಲರೂ ಆಶ್ಚರ್ಯಚಕಿತರಾದರು.

ಮೂರಂಕಿ ಸಂಖ್ಯೆಗಳ ಘನಗಳನ್ನು ಮತ್ತು ವರ್ಗ ಸಂಖ್ಯೆಗಳನ್ನು ಯಾವುದೇ ತಂತ್ರಾಂಶಗಳ ಸಹಾಯವಿಲ್ಲದೆ ಕ್ಷಣಾ ಗಳಿಗೆಯಲ್ಲಿ ಹೇಳುತ್ತಿದ್ದ ಸಾಮರ್ಥ್ಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾದರಿಯಂತಿತ್ತು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಹಾಗೊ ಶ್ರೀಧರ ಗುಡಿಗಾರರ ಮುತುವರ್ಜಿಯಿಂದ ಕಾರ್ಯಕ್ರಮವು ಜರುಗಿತು.

ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದವಿತ್ತರು.

Related posts

ಶರತ್ ಗೋರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ

Suddi Udaya

ಉಜಿರೆ: ಧರ್ಮ ಸಂರಕ್ಷಣಾ ಯಾತ್ರೆಯ ಬಗ್ಗೆ ಸಮಾಲೋಚನೆ ಸಭೆ

Suddi Udaya

ಎಸ್.ಡಿ.ಎಂ ನಲ್ಲಿ ವಿಶ್ವ ಪರಿಸರ ದಿನಾಚರಣೆ, ಉಜಿರೆ ಪೇಟೆಯವರೆಗೆ ವಿದ್ಯಾರ್ಥಿಗಳಿಂದ ಪರಿಸರ ಜಾಥಾ

Suddi Udaya

ನ.4 : ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಬೃಹತ್ ರಕ್ತದಾನ  ಶಿಬಿರ 

Suddi Udaya

ವಲಯ ಮಟ್ಟದ ಖೋ ಖೋ ಪಂದ್ಯಾಟ: ಕರಂಬಾರು ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ: ಶ್ರೀ ಮಂ. ಅ. ಪ್ರೌಢಶಾಲೆಯ ಶಿಕ್ಷಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!