April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿ.29: ಬಳ್ಳಮಂಜದಲ್ಲಿ ಶೇಷ-ನಾಗ ಜೋಡುಕರೆ ಕಂಬಳ

ಮಡಂತ್ಯಾರು: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ “ದೇವರ ಕಂಬಳ” ಎಂದೇ ಪ್ರಸಿದ್ದಿ ಪಡೆದ ತೇರಬಾಕಿಮಾರು ಗದ್ದೆಯಲ್ಲಿ 27 ನೇ ವರ್ಷದ ಶೇಷ-ನಾಗ ಜೋಡುಕರೆ ಕಂಬಳವು ಅನುವಂಶೀಯ ಆಡಳಿತ ಮೊಕ್ತೇಸರರಾದ ಡಾ. ಎಂ. ಹರ್ಷ ಸಂಪಿಗೆತ್ತಾಯ ಇವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಡಿ. 29 ರಂದು ನಡೆಯಲಿರುವುದು.


ಬೆಳಿಗ್ಗೆ ಕಂಬಳದ ಉದ್ಘಾಟನಾ ಸಮಾರಂಭವನ್ನು ಮಾಧವ ಜೋಗಿತ್ತಾಯ ಬಂಗಳಾಯಿ ಅವರು ಕಂಬಳ ಕೂಟ ಉದ್ಘಾಟಿಸುವರು. ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾವೀರ ಕಾಲೇಜು ಪ್ರಾಂಶುಪಾಲ ಡಾ| ರಾಧಾಕೃಷ್ಣ ಶೆಟ್ಟಿ, ಮಚ್ಚಿನ ಎಸ್ ಸಿಎಸ್‌ನ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ದುಗ್ಗಪ್ಪ ಗೌಡ ಪೊಸಂದೊಡಿ ಮಚ್ಚಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಸದಾನಂದ ಪೂಜಾರಿ ಕುರುಡಂಗೆ, ದುಗ್ಗಪ್ಪ ಗೌಡ ಪೊಸಂದೊಡಿ, ಗ್ರಾಮ ಆಡಳಿತಾಧಿಕಾರಿ ಸತೀಶ್ ಪಿಂಟೋ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

8.30ರಿಂದ ನೇಗಿಲು ಕಿರಿಯ ಮತ್ತು ಹಿರಿಯ, 11ರಿಂದ ಹಗ್ಗ ಕಿರಿಯ ಮತ್ತು ಹಿರಿಯ ಮತ್ತು ಅಪರಾಹ್ನ ಗಂಟೆ 2ರಿಂದ ಅಡ್ಡ ಹಲಗೆಯ ಸ್ಪರ್ಧೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಅನೇಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಮತ್ತು ಬಹುಮಾನ ವಿತರಣೆ ನಡೆಯಲಿದೆ.

ತೀರ್ಪುಗಾರರಾಗಿ ಸಂಜೀವ ಶೆಟ್ಟಿ ಮುಗೆರೋಡಿ, ಸಂಜಿತ್ ಶೆಟ್ಟಿ ಮುಗೇರೋಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ, ಅಜಿತ್ ಕುಮಾರ್ ಜೈನ್, ಈದು ಪಾಡ್ಯಾರು, ಸುಭಾಷ್ ಚಂದ್ರ, ಜನಾರ್ದನ ಕರ್ಪೆ, ಅವಿನಾಶ್ ಕುಲಾಲ್ ಮಣೂರು, ಸುದೇಶ್ ಕುಮಾರ್ ಆರಿಗ ದೇಣೂರು, ಮಿಥುನ್, ವಿಶ್ವರಾಜ್ ಬದ್ರೋಟ್ಟು, ದಾಮೋದರ ಆಚಾರ್ಯ ಮಡಕ್ಕಿಲ, ವಿಜಯ ಕುಮಾರ್ ಕಂಗಿತ್ತಿಲು, ಧರಣೇಂದ್ರ ಕುಮಾರ್ ಜೈನ್ ಮದ್ದಡ್ಡ, ಪ್ರಕಾಶ್ ಕರ್ಲ, ರಾಜೀವ ಶೆಟ್ಟಿ ಎತ್ತೂರು, ಸುಧಾಕರ ಶೆಟ್ಟಿ, ಮುಗೆರೋಡಿ, ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಸತೀಶ್ ಹೊಸ್ಟಾರ್, ಚೇತನ್ ಗೌಡ ಪಾಲಡ್ಕ ಅವರು ತೀರ್ಪುಗಾರರ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಬಹುಮಾನ: ನೇಗಿಲು ಹಿರಿಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ.15000 ಮತ್ತು ಶಾಶ್ವತ ಫಲಕ, ನೇಗಿಲು ಕಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಹಗ್ಗ ಹಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಹಗ್ಗ ಕಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಅಡ್ಡ ಹಲಗೆಯಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ ಹಾಗೂ ಕ್ರಮವಾಗಿ ದ್ವಿತೀಯ ಸ್ಥಾನ ಪಡೆದವರಿಗೆ ರೂ. 10000 ಮತ್ತು ಶಾಶ್ವತ ಫಲಕ ನೀಡಲಾಗುವುದು.

Related posts

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ಸಮಿತಿ ರಚನೆ 62 ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಚಂದ್ರಶೇಖರ ಕನ್ನಾಜೆ ಆಯ್ಕೆ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ‘ಶೈಕ್ಷಣಿಕ ವರ್ಷಾರಂಭ’ ಹಾಗೂ ವಿದ್ಯಾರ್ಥಿ ಹಾಗೂ ಹೆತ್ತವರಿಗೆ ‘ಮಾಹಿತಿ ಕಾರ್ಯಕ್ರಮ’

Suddi Udaya

ಉಜಿರೆ: ಮಹಾಮಳೆಗೆ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಕಂಪೌಂಡ್ ಕುಸಿತ: ಸ್ಕೂಟಿ, ಬೈಕ್ ಜಖಂ: ಬೀಳುವ ಹಂತದಲ್ಲಿದೆ ವಾಸದ ಮನೆ

Suddi Udaya

ಕನ್ಯಾಡಿ 2: ಸ.ಉ. ಹಿ.ಪ್ರಾ. ಶಾಲೆಗೆ ಕನ್ಯಾಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಿಂಟರ್ ಕೊಡುಗೆ

Suddi Udaya

ಇಲಂತಿಲ ಗ್ರಾ. ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾಗಿ ಸವಿತಾ ಹೆಚ್ ಆಯ್ಕೆ

Suddi Udaya

ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya
error: Content is protected !!