29.1 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

ಬೆಳ್ತಂಗಡಿ: ಅಮೃತ ಸೋಮೇಶ್ವರ ಅವರು ಸದಾ ಮಾನವೀಯತೆಯ ಪರವಾಗಿದ್ದರು. ವಿಶ್ವ ಮಾನವ ಕಲ್ಪನೆ ಅವರ ಉಸಿರಾಗಿತ್ತು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ತಿಳಿಸಿದರು.

ಬೆಳ್ತಂಗಡಿಯಲ್ಲಿ ಜರುಗಿದ ಅಮೃತ ಸೋಮೇಶ್ವರ ಅವರ ನೆನಪಿನ ಕಾರ್ಯಕ್ರಮ ‘ಅಮೃತ ಮಥನ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರಿಗೂ ಗೌರವದ ಬದುಕು ಸಿಗಬೇಕು ಎನ್ನುವುದರ ಬಗ್ಗೆ ಅವರು ಖಚಿತ ನೋಟವನ್ನು ಹೊಂದಿದ್ದರು. ಅವರ ಸಾಹಿತ್ಯ ಇದನ್ನೇ ಪ್ರತಿಪಾದಿಸುತ್ತದೆ. ತುಳು ಸಾಹಿತ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿದ ತಿರುವು ಅಸಾಧಾರಣವಾದದ್ದು ಎಂದರು.

ತಂದೆಯ ವ್ಯಕ್ತಿತ್ವ ಹಾಗೂ ಸಾಹಿತ್ಯದ ಅವಲೋಕನ ನಡೆಸಿದ ಡಾ. ಚೇತನ ಸೋಮೇಶ್ವರ ಅವರು ತಂದೆ ಮೌನಿ ಆದರೆ ಸಮಾಜದ ಅನ್ಯಾಯದ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಅವರ ಬರಹಗಳು ಒಂದು ರೀತಿಯಲ್ಲಿ ಸಾರ್ವಜನಿಕ ಆಸ್ತಿಯಾಗಿತ್ತು. ಜನಸಾಮಾನ್ಯರು ಇವರ ಗೀತೆಗಳನ್ನು ತಮ್ಮ ಬದುಕಿನ ಪ್ರತಿಬಿಂಬ ಎಂದು ಭಾವಿಸಿದ್ದರು ಎಂದರು.

ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಅವರು ಅಮೃತ ಸೋಮೇಶ್ವರ ಅವರ ರಂಗ ನಾಟಕಗಳ ಬಗ್ಗೆ ಮಾತನಾಡಿ ತುಳು ರಂಗಭೂಮಿಗೆ ಹೊಸತನ ದೊರಕಿದ್ದು ಅಮೃತರ ರಚನೆಗಳಿಂದ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಅವರು ತಮ್ಮ ಮಾವನವರ ಮಾನವೀಯ ಗುಣವನ್ನು ಸ್ಮರಿಸಿದರು.

ಸಮಾಜ ವಿಜ್ಞಾನಿ ಪ್ರಕಾಶ ಭಟ್, ಚರಣ್ ಕುಮಾರ್, ನರೇಂದ್ರ ರೈ ದೇರ್ಲ, ಜಿತು ನಿಡ್ಲೆ, ಡಾ. ಉದಯಚಂದ್ರ, ಡಾ. ರವಿನಾರಾಯಣ ಚಕ್ರಕೋಡಿ ಮಾತನಾಡಿದರು

ಬೆಳ್ತಂಗಡಿಯಲ್ಲಿ ಜರುಗಿದ ‘ಅಮೃತ ಮಥನ’ ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರ ಅವರ ನುಡಿಗಳ ಫಲಕವನ್ನು ಅನಾವರಣ ಮಾಡಲಾಯಿತು. ರಾಜೇಶ್ವರಿ ಚೇತನ್, ಪ್ರಕಾಶ ಭಟ್, ಚೇತನ್ ಸೋಮೇಶ್ವರ, ವಿದ್ದು ಉಚ್ಚಿಲ್, ಜಿ ಎನ್ ಮೋಹನ್ ಹಾಜರಿದ್ದರು

Related posts

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ರೂ‌ 1.50 ಕೋಟಿ ಬೆಲೆಯ ಬಿಳಿ ಬಣ್ಣದ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರು

Suddi Udaya

ದಿಡುಪೆ- ಕಜಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ, ಮಲವಂತಿಗೆ, ಕಜಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು

Suddi Udaya

ಡಿ.19: ಗುರುವಾಯನಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ನಾವರ: ಡೆಂಗ್ಯೂ ವಿರೋಧ ಮಾಸಾಚರಣೆ ಮನೆ ಮನೆಗೆ ಭೇಟಿ ಹಾಗೂ ಮುಂಜಾಗೃತ ಮಾಹಿತಿ ಕಾರ್ಯಕ್ರಮ

Suddi Udaya

ಗ್ರಾ.ಪಂ. ಮಟ್ಟದ ಸಂಜೀವಿನಿ ಮುಖ್ಯಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದಿಂದ ಬೆಂಗಳೂರುನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

Suddi Udaya
error: Content is protected !!