23.5 C
ಪುತ್ತೂರು, ಬೆಳ್ತಂಗಡಿ
June 4, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಕೊಕ್ಕಡ ಸಂಗಮ್ ಯುವಕ ಮಂಡಲ ಇದರ ಸರ್ವ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಕೊಕ್ಕಡ ಯುವಕ ಮಂಡಲದ ಆವರಣದಲ್ಲಿ ಜ.12ರಂದು ನಡೆಯಿತು.

ಅಧ್ಯಕ್ಷತೆಯನ್ನು ಹಿರಿಯರಾದ ಕುಂಞಿಕಣ್ಣನ್ ಅವರು ವಹಿಸಿದ್ದರು. ಯುವಕ ಮಂಡಲ ಕೊಕ್ಕಡ ಸಂಗಮ್ ಯುವಕ ಮಂಡಲ ಅಧ್ಯಕ್ಷ ರೂಪೇಶ್, ಹಿರಿಯರಾದ ಗಣೇಶ್ ದೇವಾಡಿಗ, ರಜಾಕ್ ದುಬೈ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಯುವಕ ಮಂಡಲದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಸ್.ಕೆ.ಹಕೀಂ, ಉಪಾಧ್ಯಕ್ಷರಾಗಿ ಅವಿನಾಶ್.ಕೆ, ಆಸೀಫ್, ಸುನೀತ್ ಅಗರ್ತ, ದಯಾನೀಶ್, ರಜಾಕ್ ಐವಾನ್, ಕಾರ್ಯದರ್ಶಿಯಾಗಿ ಸುನಿಶ್ ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ಆನ್ಸರ್, ಕೋಶಾಧಿಕಾರಿಯಾಗಿ ಗಿರೀಶ್ ಶಬರಾಡಿ, ಸದಸ್ಯರಾಗಿ ಚೇತನ್.ಟಿ.ಎಲ್, ಶರೀಫ್ ಆಲ್ಫಾ, ಉಮರ್ ಬೈಲಂಗಡಿ, ಅಶ್ವಿನ್ ಸಾಲಿಯಾನ್, ಮಿಥಿಲೇಶ್, ಹಕೀಂ ಮುಂಡೇಲ್ ಇವರುಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ರಜಾಕ್.ಎಂ.ಎಚ್ ಸ್ವಾಗತಿಸಿದರು, ರಾಜಗೋಪಾಲ್ ಬೆನಕ ವಂದಿಸಿದರು.

Related posts

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾಗಿ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು ಆಯ್ಕೆ

Suddi Udaya

ಬಾನಾಡಿಗಳ ಬಾಯಾರಿಕೆ ಇಂಗಿಸಲು ಎಸ್ ಡಿ ಎಮ್ ನಲ್ಲಿ ವಿಶೇಷ ಯೋಜನೆ

Suddi Udaya

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

Suddi Udaya

ನೀರಚಿಲುಮೆಯಲ್ಲಿ ಚರಂಡಿಗೆ ಉರುಳಿದ ಕಾರು: ನ್ಯಾಯವಾದಿ ಬಿ.ಎಂ ಭಟ್ ಅಪಾಯದಿಂದ ಪಾರು

Suddi Udaya

ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲು ಹಿನ್ನೆಲೆ: ಶಾಸಕ ಹರೀಶ್ ಪೂಂಜರ‌ ಬಂಧನಕ್ಕೆ ಅವರ ಮನೆಗೆ ಬಂದ ಪೊಲೀಸರು

Suddi Udaya

ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ

Suddi Udaya
error: Content is protected !!