April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

ವೇಣೂರು:ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪತ್ರಕರ್ತ ಎಚ್ ಮೊಹಮ್ಮದ್ ವೇಣೂರು ಮಾತಾಡಿ ಖತೀಬರಿಗೆ ಶುಭ ಹಾರೈಸಿದರು.

ಪ್ರಮುಖರಾದ ಚಿಕ್ಕಮಗಳೂರಿನ ಡಾ ಸಲೀಮ್ ಗರ್ಡಾಡಿ,ಅಬ್ದುಲ್ ರಹಿಮಾನ್ ಕಟ್ಟೆ,ರಫೀಕ್ ಪಡ್ಡ ,ಮಹಮ್ಮದ್ ಪಿಜೆ, ಖಾಲಿದ್ ಪುಲಬೆ, ಅಬ್ದು ಸಲಾಂ ಕೇಶವನಗರ, ನಜೀರ್ ಪೆರಿಂಜೆ ,ಪೆರಿಂಜೆ ಮದರಸದ ಅಧ್ಯಾಪಕ ಮೊಹಮ್ಮದ್ ಅಲ್ತಾಫ್ ,ಕೆಪಿ ಬಶೀರ್ ,ಶಬ್ಬೀರ್ ಕಟ್ಟೆ , ಶಬ್ಬೀರ್ ಪಡ್ಡ,ಸದರ್ ಮೊಹಲ್ಲಿಂ ಸೇರಿದಂತೆ ಸಿಬಂದಿವರ್ಗ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಮಸೀದಿ ಸಮಿತಿ ಮತ್ತು ಜಮಾತಿನ ಸದಸ್ಯರು ಶಾಲು ಹೊದಿಸಿ ಶುಭ ಹಾರೈಸಿದ ಬಗ್ಗೆ ಮಾತಾಡಿದ ಖತೀಬ್ ಅಶ್ರಫ್ ಫೈಝಿ, ಜಮಾತಿಗೆ, ಈ ನಾಡಿಗೆ ಮತ್ತು ದೇಶದ ಉನ್ನತಿಗಾಗಿ ಪ್ರಾರ್ಥಿಸುತ್ತೇನೆಂದರು. ಇಸ್ಮಾಯಿಲ್ ಎಚ್ ಗಾಂಧಿನಗರ ಸ್ವಾಗತಿಸಿ, ವಂದಿಸಿದರು.

Related posts

ಕೇಳ್ತಾಜೆ: ಸಿರಾಜುಲ್ ಹುದಾ ಮದರಸ ಹಾಗೂ ಜುಮ್ಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪಡಂಗಡಿ ಗ್ರಾ.ಪಂ. ಗ್ರಂಥಾಲಯಕ್ಕೆ ಪ್ರವೀಣ್ ರೈ ರವರಿಂದ 54 ಪುಸ್ತಕಗಳ ಕೊಡುಗೆ

Suddi Udaya

ಮದ್ದಡ್ಕ ಪೇಟೆಯಲ್ಲಿ 2 ತಿಂಗಳಿಂದ ಉರಿಯುತ್ತಿಲ್ಲ ದಾರಿ ದೀಪ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಸಫರೇ ತಕ್‌ರೀಮ್ ಗೆ ಕಾಜೂರಿನಲ್ಲಿ ಚಾಲನೆ

Suddi Udaya

ಮುಂಡಾಜೆ: ರಾಷ್ಟ್ರೀಯ ಮತದಾರರ ದಿನಾಚರಣೆ

Suddi Udaya

ಬಾರ್ಯ ಗ್ರಾ.ಪಂ. ಅಧ್ಯಕ್ಷರಾಗಿ ಉಸ್ಮಾನ್, ಉಪಾಧ್ಯಕ್ಷರಾಗಿ ಯಶೋಧ ಶೆಟ್ಟಿ ಆಯ್ಕೆ

Suddi Udaya
error: Content is protected !!