38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

ವೇಣೂರು:ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪತ್ರಕರ್ತ ಎಚ್ ಮೊಹಮ್ಮದ್ ವೇಣೂರು ಮಾತಾಡಿ ಖತೀಬರಿಗೆ ಶುಭ ಹಾರೈಸಿದರು.

ಪ್ರಮುಖರಾದ ಚಿಕ್ಕಮಗಳೂರಿನ ಡಾ ಸಲೀಮ್ ಗರ್ಡಾಡಿ,ಅಬ್ದುಲ್ ರಹಿಮಾನ್ ಕಟ್ಟೆ,ರಫೀಕ್ ಪಡ್ಡ ,ಮಹಮ್ಮದ್ ಪಿಜೆ, ಖಾಲಿದ್ ಪುಲಬೆ, ಅಬ್ದು ಸಲಾಂ ಕೇಶವನಗರ, ನಜೀರ್ ಪೆರಿಂಜೆ ,ಪೆರಿಂಜೆ ಮದರಸದ ಅಧ್ಯಾಪಕ ಮೊಹಮ್ಮದ್ ಅಲ್ತಾಫ್ ,ಕೆಪಿ ಬಶೀರ್ ,ಶಬ್ಬೀರ್ ಕಟ್ಟೆ , ಶಬ್ಬೀರ್ ಪಡ್ಡ,ಸದರ್ ಮೊಹಲ್ಲಿಂ ಸೇರಿದಂತೆ ಸಿಬಂದಿವರ್ಗ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಮಸೀದಿ ಸಮಿತಿ ಮತ್ತು ಜಮಾತಿನ ಸದಸ್ಯರು ಶಾಲು ಹೊದಿಸಿ ಶುಭ ಹಾರೈಸಿದ ಬಗ್ಗೆ ಮಾತಾಡಿದ ಖತೀಬ್ ಅಶ್ರಫ್ ಫೈಝಿ, ಜಮಾತಿಗೆ, ಈ ನಾಡಿಗೆ ಮತ್ತು ದೇಶದ ಉನ್ನತಿಗಾಗಿ ಪ್ರಾರ್ಥಿಸುತ್ತೇನೆಂದರು. ಇಸ್ಮಾಯಿಲ್ ಎಚ್ ಗಾಂಧಿನಗರ ಸ್ವಾಗತಿಸಿ, ವಂದಿಸಿದರು.

Related posts

ಕನ್ಯಾಡಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಮೂಡದ ಮಾಜಿ ಅಧ್ಯಕ್ಷ ತೇಜೋಮಯ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಬನ್ನಿಸ್ ಟಂಟೋಲ ದಳದ ಚಟುವಟಿಕಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿರುವ ಅಂಶಗಳೇನು?

Suddi Udaya

ಖೋ ಖೋ ಪಂದ್ಯಾಟ : ನಯನಾಡು ಸರಕಾರಿ‌ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕನ್ಯಾಡಿ ಗ್ರಾಮ ಸಮಿತಿ ಹಾಗೂ ಯುವ ವೇದಿಕೆ ಸಮಿತಿ ರಚನೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!