April 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿವರದಿ

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತರ ಜಯಭೇರಿ

ನಿಡ್ಲೆ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದ್ದಾರೆ.

ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್ (497), ಧನಂಜಯ ಗೌಡ ಕಳೆಂಜ (559), ವಿಜಯ ಕುಮಾರ್ ಹೆಚ್. (583), ಜಯರಾಮ ಪಾಳಂದೆ ಎಸ್. (435), ಆನಂದ ಗೌಡ ಎಂ (501), ಕೆ. ಹೇಮಂತ್ ಗೌಡ (463), ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮೋಹನ ಪೂಜಾರಿ ಬಿ. (494), ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಧನಂಜಯ ಬಂಡೇರಿ (507), ಮಹಿಳಾ ಕ್ಷೇತ್ರದಿಂದ ಗಾಯತ್ರಿ ಹೆಚ್. ಗೌಡ (524), ವಿಜಯಲಕ್ಷ್ಮೀ ಕೆ. (485 ), ಪ.ಜಾತಿ ಕ್ಷೇತ್ರದಿಂದ ರಾಜು (506), ಪ. ಪಂಗಡ ಕ್ಷೇತ್ರದಿಂದ ಡೀಕಯ್ಯ ಎಂ.ಕೆ. (575) ಜಯಭೇರಿ ಭಾರಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತರಾದ ಅಶೋಕ್ ಭಟ್ (348) ಗಣೇಶ್ ಗೌಡ (315), ಮಾಧವ ಗೌಡ (280), ವೀರೇಂದ್ರ ಕುಮಾರ್ (280), ಶ್ಯಾಮ್ ಪ್ರಕಾಶ್ ಭಟ್ (260), ಸೆಬಾಸ್ಟಿನ್ ಪಿ.ಟಿ (339), ಐಶ್ವರ್ಯ ಜೆ. ಶೆಟ್ಟಿ (333), ಪ್ರೇಮ (284), ಸೋಮಪ್ಪ ಪೂಜಾರಿ (280), ವಾಸಪ್ಪ ಗೌಡ (281), ಶ್ರೀಧರ ಎಸ್.(292) ಆನಂದ ಮಲೆಕುಡಿಯ (203) ಮತ ಪಡೆದು ಸೋಲು ಅನುಭವಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಕಾರ್ಯನಿರ್ವಹಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪದ್ಮನಾಭ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Related posts

ವೇಣೂರು: ಕಲ್ಲು ಬಸದಿ ನಿವಾಸಿ ವಾಗೀಶ್ವರಿ ಇಂದ್ರ ನಿಧನ

Suddi Udaya

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನ ಪರೀಕ್ಷೆ: ಹೊಕ್ಕಾಡಿಗೋಳಿ ಸ.ಉ.ಪ್ರಾ ಶಾಲೆಯ ವಿದ್ಯಾರ್ಥಿ ರೈಶಾ ಸುಹಾನ ರಿಗೆ ಉತ್ತಮ ಅಂಕ

Suddi Udaya

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

Suddi Udaya

ಮಚ್ಚಿನ ಸ. ಪ್ರೌ.ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಗುರಿಪಳ್ಳ ಬಿಜೆಪಿಯ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Suddi Udaya

ಇಂಗ್ಲೆಂಡ್ ನಲ್ಲಿ ಗುರುವಾಯನಕೆರೆಯ 12 ವರ್ಷದ ಬಾಲಕನ ಮಹಾನ್ ಸಾಧನೆ- ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4ನೇ ಸುತ್ತಿನಲ್ಲಿ ಪ್ರಶಸ್ತಿ ಪಡೆದ ಕಾರ್ ರೇಸರ್ ಕನಿಷ್ಕ್ ರಾವ್

Suddi Udaya
error: Content is protected !!