33.1 C
ಪುತ್ತೂರು, ಬೆಳ್ತಂಗಡಿ
February 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ ಉಮರ್ ಫಾರೂಕ್ ಮೃತದೇಹ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ

ಬೆಳ್ತಂಗಡಿ : ಗೇರುಕಟ್ಟೆ ತೋಟದ ಕೆರೆಯಲ್ಲಿ 22-10-2024 ರಂದು ಅಪರಿಚಿತ ಶವ ಪತ್ತೆಯಾದ ಸಂಬಂಧಿಸಿದಂತೆ ಡಿಎನ್ಎ ಮೂಲಕ ಮೃತನ ಗುರುತು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು. ಇದೀಗ ಎಸಿ ಹಾಗೂ ಪೊಲೀಸರ ಸಮ್ಮುಖದಲ್ಲಿ ದಫನ ಮಾಡಿದ್ದ ಮೃತದೇಹವನ್ನು ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸ್ಮಶಾನದಲ್ಲಿ ಪೊಲೀಸರು ಉಮರ್ ಫಾರೂಕ್ ಶವವನ್ನು 23-10-2024 ರಂದು ದಫನ ಮಾಡಿದ್ದ ಉಮರ್ ಫಾರೂಕ್ ಮೃತದೇಹವನ್ನು ಫೆ.4 ರಂದು ಬೆಳಗ್ಗೆ ಪುತ್ತೂರು ಎಸಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ಹಿಟಾಚಿ ಮೂಲಕ ಮಣ್ಣನ್ನು ಅಗೆದು ನಂತರ ಮೃತದೇಹವನ್ನು ಹೊರಗಡೆ ತೆಗೆದು ಮಹಜರು ಮಾಡಿ ನಂತರ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ನಂತರ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಮೃತದೇಹ ತೆಗೆದುಕೊಂಡು ಹೋಗಿ ಪರಪ್ಪು ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ದಫನ ಕಾರ್ಯ ನಡೆಸಿದ್ದಾರೆ.

ಪುತ್ತೂರು ಎಸಿ ಶ್ರವಣ್ ಕುಮಾರ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ, ಪ್ರೋಪೆಷನರಿ ಐಪಿಎಸ್ ಮನಿಷಾ ಮನೋಹಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ, ಬೆಳ್ತಂಗಡಿ ಟಿಹೆಚ್ಓ ಸಂಜೀತ್ ಹೆಗ್ಡೆ, ಆರ್.ಐ ಪವಡಪ್ಪ, ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಮುರುಳೀಧರ್ ನಾಯ್ಕ್, ಹೆಡ್ ಕಾನ್ಟೇನಲ್ ವಿಶ್ವನಾಥ್, ಕಳಿಯ ಪಿಡಿಓ ಸಂತೋಷ್ ಪಾಟೀಲ್,ಕಳಿಯ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ಪೃಥ್ವಿರಾಜ್.ಪಿ.ಶೆಟ್ಟಿ, ಗ್ರಾಮ ಸಹಾಯಕ ಸ್ಟ್ಯಾನಿ ಡಿಸೋಜ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಕರ್.ಎಮ್, ಸದಸ್ಯ ಕರೀಂ ಗೇರುಕಟ್ಟೆ, ಉಮರ್ ಫಾರೂಕ್ ಕುಟುಂಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಮಹಾಸಭೆ

Suddi Udaya

ಎ.13-22: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಎ.25 : ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ

Suddi Udaya

ಲೋಕಸಭಾ ಚುನಾವಣೆ ಹಿನ್ನಲೆ: ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ. ಎಫ್ ಯೋಧರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರ ಪಥ ಸಂಚಲನ

Suddi Udaya

ಧರ್ಮಸ್ಥಳ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಜೆಸಿಐ ಮಡಂತ್ಯಾರು “ವಿಜಯ 2024” ವತಿಯಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!