February 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ

ಬೆಳ್ತಂಗಡಿ: ಮೊಗ್ರು ಗ್ರಾಮ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಮನಗಂಡು ಶಾಲೆಯನ್ನು ಉನ್ನತೀಕರಿಸಿ, ಆಧುನಿಕ ಸೌಲಭ್ಯವನ್ನು ಒದಗಿಸುವ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್‌ನ್ನು ಸ್ಥಾಪನೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇಲ್ಲಿಗೆ ಶಾಲೆಯನ್ನು ಅಭಿವೃದ್ದಿ ಮಾಡುವ ಪ್ರಸ್ತಾವ ಸಲ್ಲಿಸಲಾಯಿತು. ಟ್ರಸ್ಟ್‌ನ ಮನವಿಯನ್ನು ಪುರಸ್ಕರಿಸಿ ಶಾಲಾ ದತ್ತು ಸ್ವೀಕಾರ ಅಧಿನಿಯಮದಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೆಳ್ತಂಗಡಿ ಹಾಗೂ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಬೆಳ್ತಂಗಡಿ ನಡುವೆ ಜ.18 ರಂದು ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಕರಾರು ಒಪ್ಪಂದದಂತೆ ಮು.ಸ.ಸಾ.ಸೇ ಟ್ರಸ್ಟ್ 2025-2026 ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರೋತ್ಸಾಹಿಸುವುದರೊಂದಿಗೆ ಸರಕಾರದಿಂದ ಶಿಕ್ಷಣಕ್ಕೆ ಸಿಗುವ ಉಚಿತ ಸೌಲಭ್ಯವನ್ನು ಮಾಹಿತಿ ನೀಡುವುದರೊಂದಿಗೆ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ 2 ಆಂಗ್ಲ ಮಾಧ್ಯಮ ಭೋದನೆಗೆ 2 ಶಿಕ್ಷಕ/ಕಿಯರನ್ನು ನೇಮಿಸುವ ಆಧುನಿಕ ತಂತ್ರಜ್ಙಾನದ ಡಿಜಿಟಲ್ ಶಿಕ್ಷಣ ಸಾಮಾಗ್ರಿ ಒದಗಿಸುವುದು.

ಶಾಲಾ ವಾತಾವರಣದಲ್ಲಿ ಆಟದ ಸಾಮಾಗ್ರಿ ಒದಗಿಸುವುದು, ಶಾಲೆಗೆ ಬೇಕಾದ ಪಿಠೋಪಕರಣ ಹಾಗೂ ಶೈಕ್ಷಣಿಕ ಸಾಮಾಗ್ರಿ ಒದಗಿಸುವುದು, ಶಾಲಾ ಪರಿಸರದಲ್ಲಿ ತರಕಾರಿ ತೋಟ ಮಾಡುವುದುದರೊಂದಿಗೆ, ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗುವಂತೆ ವಾಹಾನ ವ್ಯವಸ್ಥೆಯನ್ನು ಒದಗಿಸುವುದರೊಂದಿಗೆ, ಯೋಗ, ಕ್ರೀಡೆ, ಸಾಂಸ್ಕೃತಿಕ ತರಭೇತಿ ಇನ್ನೀತರ ಸೌಲಭ್ಯದೊಂದಿಗೆ ಟ್ರಸ್ಟ್ ಸ,ಕಿ,ಪ್ರಾ.ಶಾಲೆ ಮೊಗ್ರು ಇದರ ಸರ್ವಾಂಗಿನ ಅಭಿವೃದ್ದಿಗೆ ಕಾರ್ಯ ನಿರ್ವಹಿಸಬಹುದು ಎಂದು ಒಪ್ಪಂದ ಕರಾರಿನಲ್ಲಿ ಉಲ್ಲೇಖಿಸಲಾಯಿತ್ತು.

ಕರಾರು ಒಪ್ಪಂದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ ಇದರ ಬಿ.ಇ.ಒ ಶ್ರೀಮತಿ ತಾರಾಕೇಸರಿ ಕಛೇರಿ ವ್ಯವಸ್ಥಾಪಕ ನರೇಶ್ ನಾಯ್ಕ ಮು.ಸ.ಶಾ.ಸೇ.ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕಾರಜೆ, ಜೊತೆ ಕಾರ್ಯದರ್ಶಿ ಉಮೇಶ ಗೌಡ ಪರಕ್ಕಜೆ ಉಪಸ್ಥಿತರಿದ್ದರು.

Related posts

ಕೊಯ್ಯೂರು: ಮಲೆಬೆಟ್ಟು, ಬಜಿಲ ಒಕ್ಕೂಟದ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ

Suddi Udaya

ಕೊಕ್ಕಡ: ಎಂಡೋ ಪೀಡಿತ ವಿಶೇಷ ಚೇತನರಿಗೆ ಉಚಿತ ಬಸ್ ಪಾಸ್ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಆರ್ಥಿಕ ನೆರವು

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!