23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಫೆ.12-16: ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಆರಾಟ್ ಉತ್ಸವ

ಚಾರ್ಮಾಡಿ: ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಆರಾಟ್ ಉತ್ಸವವು ಫೆ.12 ರಿಂದ ಫೆ.16 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಫೆ.12 ಪೂರ್ವಾಹ್ನ ಪ್ರಾರ್ಥನೆ ಪಂಚಗವ್ಯ ಪುಣ್ಯಾಹ, ಗಣಹೋಮ, ಸಾನಿಧ್ಯ ಕಲಶಾಭಿಷೇಕ, ಸಾನಿಧ್ಯ ಕಲಶ ಪೂಜೆ, ಕೊಡಿ ಏರುವುದು, ಮಧ್ಯಾಹ್ನ 12ಕ್ಕೆ ಮಹಾಪೂಜೆ ಉತ್ಸವಬಲಿ, ಸಂಜೆ 6ಕ್ಕೆ ದೀಪಾರಾಧನೆ, 7ಕ್ಕೆ ಊರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಕ್ಕೆ ಪಂಚಶ್ರೀ ಸಾಂಸ್ಕೃತಿಕ ಸೇವಾ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗುರುಗಳು ರಾಮಣ್ಣ ಭಂಡಾರಿ ನಿರ್ದೇಶನದ ಮಕ್ಕಳ ಯಕ್ಷಗಾನ ‘ಮಹಿಷಮರ್ದಿನಿ’. ಫೆ.13 ಬೆಳಿಗ್ಗೆ ಗಣಹೋಮ, ಉಷಃಪೂಜೆ, ಬಿಂಬಶುದ್ಧಿ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ತಂತ್ರಬಲಿ, ಉತ್ಸವಬಲಿ, ಸಂಜೆ ೭ಕ್ಕೆ ಊರವರ ಮತ್ತು ಪ್ರೌಢ ಶಾಲಾ ಮಕ್ಕಳು ಮತ್ತು ಕಾಲೇಜು ಮಕ್ಕಳ ನೃತ್ಯ ಕಾರ್ಯಕ್ರಮ ‘ನೃತ್ಯ ವೈವಿಧ್ಯ’, ರಾತ್ರಿ ೮ಕ್ಕೆ ದೊಡ್ಡ ರಂಗಪೂಜೆ, ಮಹಾಪೂಜೆ, ಉತ್ಸವ ಬಲಿ, ನೃತ್ಯಬಲಿ, 8.30ಕ್ಕೆ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಫೆ.14 ಬೆಳಿಗ್ಗೆ ಗಣಹೋಮ ಉಷಃಪೂಜೆ, ಪ್ರಾತಃಬಲಿ ಸಾನಿಧ್ಯ ನವಕ ಕಲಶಾಭಿಷೇಕ, ಸಂಜೆ ದೀಪಾರಾಧನೆ, ನೃತ್ಯಾರ್ಪಣಂ ಶ್ರೀ ದೇವಿ ಕಿರಣ್ ಕಲಾನಿಕೇತನ ಇದರ ನೃತ್ಯ ಶಿಕ್ಷಕಿ ವಿದೂಷಿ ಶ್ರೀಮತಿ ಸ್ವಾತಿ ಜಯರಾಂ ಮತ್ತು ವಿದೂಷಿ ಶ್ರೀಮತಿ ಸೃಷ್ಟಿ ಸತೀಶ್ ಇವರ ಶಿಷ್ಯ ವೃಂದದಿಂದ “ನಾಟ್ಯ ವೈಭವ, ಸಂಜೆ 8.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆ ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರು ಪ್ರಕಾಶ್ ಹೊಸಮಠ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಕೌನ್ಸಿಲರ್ ದುರ್ಗಾಪರಮೇಶ್ವರ ಭಟ್ ನೀಡಲಿದ್ದಾರೆ. ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದರೆ. ರಾತ್ರಿ 9-೦೦ರಿಂದ ಪಂಚಶ್ರೀ ಕಲಾವಿದರು ಚಾರ್ಮಾಡಿ ಈ ನಾಡರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಕುಲಾಲ್ ಸಾರಥ್ಯದ ಮಧು ಬಂಗೇರ ಕಲ್ಲಡ್ಕ ನಿರ್ದೇಶನದ “ಇನಿ ಅತ್ತ್ಂಡ ಎಲ್ಲೆ” ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಲಿದೆ.


ಫೆ.15 ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಪ್ರಾತಃಬಲಿ, ತುಲಾಭಾರ ಸೇವೆ, ನವಕ ಕಲಶಾಭಿಷೇಕ, ಸಂಜೆ 6ಕ್ಕೆ ಮತ್ತೂರು ಬೆಡಿ ಸೇವೆ, ಭಜನಾ ಕಮ್ಮಟೋತ್ಸವ, ರಾತ್ರಿ 9ಕ್ಕೆ ದೊಡ್ಡ ರಂಗಪೂಜೆ, ರಥಬೀದಿಯ ದೇವರ ಕಟ್ಟೆಗೆ ದೇವರ ಸವಾರಿ, ಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ, ಸೇವಾ ಸುತ್ತುಗಳು, ನೃತ್ಯಬಲಿ, ಬಟ್ಟಲು ಕಾಣಿಕೆ, ದೇವರ ಶಯನ, ಕವಾಟಬಂಧನ.
ಫೆ.16 ಬೆಳಿಗ್ಗೆ ಕವಾಟೋದ್ಘಾಟನೆ, ಆರಾಟು ಬಲಿ, ಆರಾಟು ಉತ್ಸವ, ದೇವರ ಜಳಕ ದೇವರ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಮಹಾಪೂಜೆ, ಕೊಡಿ ಇಳಿಸುವುದು, ಸಂಪ್ರೊಕ್ಷಣತೆ, ಮಂತ್ರಾಕ್ಷತೆ, ಸಂಜೆ ದೈವಗಳ ಭಂಡಾರ ಹೊರಡುವುದು, ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಸಂಜೆ 7ಕ್ಕೆ ರಂಗಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Related posts

ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಸಮಿತಿಯಿಂದ ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

Suddi Udaya

ಕಳಿಯ ಗ್ರಾಮದ ಕೊರಂಜ ನಿವಾಸಿ ಜಯಪ್ರಕಾಶ್ ನಿಧನ

Suddi Udaya

ಉತ್ತರಾಖಂಡ ಸುರಖಂಡ ಶಕ್ತಿ ಪೀಠಕ್ಕೆ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ

Suddi Udaya

ಇಂದು (ಆ.28) ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ರಾಜ್ಯಪಾಲರ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಐವನ್ ಡಿ ಸೋಜಾ ಮೇಲೆ ದೂರು ದಾಖಲಿಸಲು ಒತ್ತಾಯಿಸಿ ರಸ್ತೆ ತಡೆ- ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಅಳದಂಗಡಿ ವಲಯ ಬಡಗಕಾರಂದೂರು ಕಾರ್ಯಕ್ಷೇತ್ರದ ಎ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya
error: Content is protected !!