23.8 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ-ಪೆರಿಯಶಾಂತಿ ಹೆದ್ದಾರಿ ಅಭಿವೃದ್ಧಿ ಖಾಸಗಿ ಜಾಗದ ಮರಗಳ ಸಮೀಕ್ಷೆ

ಸ್ಪರ್ ರಸ್ತೆಯಾಗಿ ಮೇಲ್ದರ್ಜೆಗೆ ಏರಿದ್ದು ಅಭಿವೃದ್ಧಿ ಹೊಂದಲಿರುವ ಉಜಿರೆ- ಪೆರಿಯಶಾಂತಿ ನಡುವಿನ ರಸ್ತೆಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದ್ದು ಇದರ ಒಂದೊಂದೇ ಹಂತದ ಸಮೀಕ್ಷೆಗಳು ನಡೆಯುತ್ತಿದ್ದು, ಉಜಿರೆಯಿಂದ ಧರ್ಮಸ್ಥಳ ತನಕ ರಸ್ತೆ ಅಭಿವೃದ್ಧಿಗೆ ತೆರವುಗೊಳ್ಳಲಿರುವ ಖಾಸಗಿ ಜಾಗಗಳಲ್ಲಿರುವ ಮರಗಳ ಸಮೀಕ್ಷೆ ನಡೆಯುತ್ತಿದೆ.
ಕೆಲವೆಡೆ ಚತುಷ್ಪಥ, ಕೆಲವೆಡೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿರುವ ಈ ರಸ್ತೆಯ ಅಭಿವೃದ್ಧಿ ವೇಳೆ ಹಲವು ಮರಗಳು ತೆರವುಗೊಳ್ಳಬೇಕಿದೆ. ಇದರ ಪ್ರಥಮ ಅಂಗವಾಗಿ ಖಾಸಗಿ ಜಾಗದಲ್ಲಿರುವ ಮರಗಳನ್ನು ಗುರುತಿಸಲಾಗುತ್ತಿದೆ. ತೆರವುಗೊಳ್ಳುವ ಪ್ರತಿ ಮರಕ್ಕೆ ಮೌಲ್ಯ ನಿಗದಿಪಡಿಸಿ‌ಕಟಾವಿನ ವೇಳೆ ಸ್ಥಳದ ಮಾಲೀಕರಿಗೆ ನೀಡಲಾಗುತ್ತದೆ.

ಸಮೀಕ್ಷೆ ಕಾರ್ಯದಲ್ಲಿ ಭೂಸ್ವಾಧೀನ ಅಧಿಕಾರಿ ಕಚೇರಿಯ ಆರ್ ಐ ನವೀನ್ ಕುಮಾರ್, ಸರ್ವೆಯರ್ ಕೃಷ್ಣಪ್ರಸಾದ್,ಬೆಳ್ತಂಗಡಿ ಅರಣ್ಯ ವಲಯದ ಡಿಆರ್ ಎಫ್ ಒ ರವಿಚಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related posts

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25,000 ಸಹಾಯಧನ ವಿತರಣೆ

Suddi Udaya

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya

ಶ್ರೀ ಧ.ಮಂ ಕಾಲೇಜಿನಲ್ಲಿ ವಿದ್ಯಾರ್ಥಿ ಸಮಾಗಮ ವಿಶೇಷ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya
error: Content is protected !!