24.4 C
ಪುತ್ತೂರು, ಬೆಳ್ತಂಗಡಿ
June 7, 2025
Uncategorized

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ಅಭಿವೃದ್ಧಿ ಎಂದರೆ ಬರೀ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಅಲ್ಲ.ವ್ಯಕ್ತಿಯೋರ್ವನ ಸಾಂಸ್ಕೃತಿಕ ಮನಸ್ಸು ಕಟ್ಟುವ ಕೆಲಸವು ಕೂಡ ಆಂತರಿಕ ಅಭಿವೃದ್ಧಿಯೇ. ಯುವ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ಕಟ್ಟದೆ ಹೋದಲ್ಲಿ ಭಾರತದ ನೈಜ ಸಾಂಸ್ಕೃತಿಕ ವಿಶ್ವರೂಪ ದರ್ಶನ ದೊರೆಯದ ಸಾಧ್ಯವಿಲ್ಲ. ಭಾರತೀಯ ಕಲಾ ಪ್ರಕಾರಗಳೆಲ್ಲವು ಸಾಮಾಜಿಕ ಮೌಲ್ಯಗಳ ಅಂತ್ಹಸತ್ವ ಅಧರಿಸಿದವುಗಳು. ಭಾರತೀಯ ಸಂಸ್ಕೃತಿಯ ನಾಟಕ ,ಯಕ್ಷಗಾನ, ಸಂಗೀತಗಳು ಮನೋರಂಜನಾ ಕಾರ್ಯಕ್ರಮಗಳಲ್ಲ. ಅದು ಕಲೆ ಸಂಸ್ಕೃತಿ, ಸಂಸ್ಕಾರ , ಆಚರಣೆ, ಆಚಾರ ವಿಚಾರಗಳ ಮನೋವಿಕಾಸದ ಒಟ್ಟು ಸಂಕಲನ.

ಈ ನೆಲದ ಮಣ್ಣಿನ ಜೀವಂತಿಕೆಯನ್ನು ,ಅದರ ಸಾರವನ್ನು,ಈ ದೇಶ ಪ್ರತಿಪಾದಿಸಿದ ಜೀವನ ಮೌಲ್ಯವನ್ನು ತಿಳಿಸುವ ಪ್ರಯತ್ನವೆ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ದೇಶ ಆಗಿದೆ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ 15 ವರ್ಷಗಳಿಂದ ಇದೇ ವಿಚಾರದಲ್ಲಿ ನಂಬಿಕೆಯಿಟ್ಟು ಬೆಳೆದಿದೆ. ಪಾಡ್ದನ, ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ಮೈಸೂರಿನ ರಂಗಾಯಣದಂತಹ ರಂಗ ಶಾಲೆಗಳನ್ನು ತೆರೆಯುವ ಆಲೋಚನೆಗಳಿವೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದರು. ಮಾಹಿತಿಗಾಗಿ ಅವರ ಪೋನ್ ನಂಬರ್ – 96633 73940

Related posts

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯ ನೇತೃತ್ವದಲ್ಲಿ ಮುಖ್ಯ ಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ರವರಿಗೆ ಸನ್ಮಾನ

Suddi Udaya

ಶಿಶಿಲ :ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

Suddi Udaya

ಬೆಳ್ತಂಗಡಿಯ ಜಗದೀಶ್ ಕುಲಾಲ್ ರವರಿಗೆ ಕುಂಬಾರರ ಸೇವಾ ಸಂಘದಿಂದ ಕ್ರೀಡಾ ರತ್ನ ಪ್ರಶಸ್ತಿ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

Suddi Udaya
error: Content is protected !!