24.6 C
ಪುತ್ತೂರು, ಬೆಳ್ತಂಗಡಿ
June 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಗಂಗಾಧರ ಬಳಂಜರವರಿಗೆ ಸೇವಾ ನಿವೃತ್ತಿ

ಬೆಳ್ತಂಗಡಿ: ಸುದೀರ್ಘ 36 ವರ್ಷಗಳ ಕಾಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಗಂಗಾಧರ ಬಳಂಜರವರು ಸೇವೆಯಿಂದ ಫೆ.28 ರಂದು ನಿವೃತ್ತಿ ಹೊಂದಿದ್ದಾರೆ.1989 ರಲ್ಲಿ ಗಂಗಾಧರ ಅವರು ಕರ್ತವ್ಯಕ್ಕೆ ಹಾಜರಾಗಿ ಪ್ರಾರಂಭದಲ್ಲಿ ಮಂಗಳೂರು ವಿಭಾಗಕ್ಕೆ ನಿಯೋಜನೆಗೊಂಡರು.

ನಂತರ ಹಾಸನ ವಿಭಾಗ, ಮೈಸೂರು ನಗರ ಸಾರಿಗೆ ವಿಭಾಗ ಮಂಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸಿ ಕಳೆದ ಏಳು ತಿಂಗಳ ಹಿಂದೆ ಭಡ್ತಿ ಗೊಂಡು ಪುತ್ತೂರು ವಿಭಾಗಕ್ಕೆ ನಿಯೋಜನೆಗೊಂಡಿರುತ್ತಾರೆ.ಮೈಸೂರು ನಗರದಲ್ಲಿ ಗ್ರಾಮಾಂತರ ಬಸ್ ನಿಲ್ದಾಣ,ಕುವೆಂಪುನಗರ ಬಸ್ ನಿಲ್ದಾಣ ಮತ್ತು ನಗರ ಸಾರಿಗೆ ಬಸ್ ನಿಲ್ದಾಣಗಳು ಇವರ ಮೇಲ್ವಿಚಾರಣೆಯಲ್ಲಿ ನಿರ್ಮಾಣವಾಗಿರುತದೆ.

ಹಾಸನದಲ್ಲಿ ಹೈಟೆಕ್ ನಗರ ಸಾರಿಗೆ ಬಸ್ ನಿಲ್ದಾಣ, ಸುಬ್ರಮಣ್ಯ, ಸುಳ್ಯ, ವಿಟ್ಲ, ಉಡುಪಿ ಹಾಗೂ ಬೈಂದೂರುನಲ್ಲಿ ಇವರ ಮಲ್ವಿಚಾರಣೆಯಲ್ಲಿ ಬಸ್ ನಿಲ್ದಾಣಗಳು ನಿರ್ಮಾಣವಾಗಿರುತದೆ. ಇವರು ಬಳಂಜ ಗ್ರಾಮದ ಪರಾರಿ ನಿವಾಸಿಯಾಗಿದ್ದು,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸದಸ್ಯ. ಪ್ರಸ್ತುತ ಮಂಗಳೂರಿನಲ್ಲಿ ಪತ್ನಿ ವಿಜಯಲಕ್ಷ್ಮಿ, ಪುತ್ರ ಚಿರಂತ್ ರವರೊಂದಿಗೆ ವಾಸವಾಗಿದ್ದಾರೆ.

Related posts

ಹೃದಯಾಘಾತದಿಂದ ಗರ್ಡಾಡಿಯ ಪದ್ಮಪ್ರಸಾದ್ ನಿಧನ

Suddi Udaya

ಪ್ರೊ. ನಾವುಜಿರೆ ನಿಧನಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡರಿಂದ ಸಂತಾಪ

Suddi Udaya

ಉಜಿರೆ ಎಸ್ ಡಿ ಎಮ್ ಕಾಲೇಜಿನಲ್ಲಿ “ಇತಿಹಾಸ ನಿರ್ಮಿಸಿದ ಇತಿಹಾಸಕಾರ” ಡಾ. ಪಾದೂರು ಗುರುರಾಜ್ ಭಟ್ ರವರ ಶತಮಾನದ ಸಂಸ್ಮರಣೆ

Suddi Udaya

ಕುಕ್ಕೇಡಿ: ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ತೆಂಕಕಾರಂದೂರು ವಿಷ್ಣು ಮೂರ್ತಿ ಮಕ್ಕಳ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ಬಾಂಜಾರು ಮಲೆ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆ

Suddi Udaya
error: Content is protected !!