ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಸಿಲ ಝಳಕ್ಕೆ ವರುಣ ಕೃಪೆ, ಬೆಳ್ತಂಗಡಿ ತಾಲೂಕಿನ ನಾನಾ ಭಾಗದಲ್ಲಿ ಮಳೆ- ಜನತೆ ಕೂಲ್ ಕೂಲ್

ಬೆಳ್ತಂಗಡಿ: ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮಂದಿಗೆ ವರುಣ ಬಂದು ತಂಪೆರೆದಿದ್ದ ಈ ವರ್ಷದ ಮೊದಲ ಮಳೆ ಸುರಿದಿದೆ. ತಾಲೂಕಿನ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದ ಕ್ಷಣಗಳ ಕಂಡು ಬಂತು. ಮಾ.11 ರಂದು 41 ಡಿಗ್ರಿ:ಸಿ ತಾಪಮಾನವಿದ್ದು ಜನತೆ ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದರು, ಮಾ.12 ರಂದು ಬಿಸಿಲ ತಾಪ ಅಧಿಕವಾಗಿತ್ತು ಆದರೆ ಸಂಜೆ ವೇಳೆ ವರುಣ ಕೃಪೆಯಿಂದ ಬಿಸಿಲ ಕಾವಿಗೆ ಬೆಂದಿದ್ದ ಇಳೆ, ಜನತೆಗೆ ಮಳೆಯ ಸಿಂಚನದಿಂದ ತಂಪೆರೆದಿದೆ. ಮಾ.12ರಂದು ಮೋಡ ಕವಿದ ವಾತವಾರಣ ತಾಲೂಕಿನ ನಾನಾ ಕಡೆಗಳಲ್ಲಿತ್ತು. ಜನರ ಮಳೆಯ ನೀರಿಕ್ಷೆಯನ್ನು ಆಪೇಕ್ಷಿಸುತ್ತಿದ್ದ ಘಟನೆಗಳು ಕಂಡು ಬಂತು.

ಬಿಸಿಲ ಕಾವು ಕೃಷಿ ಭೂಮಿಗೂ ವ್ಯಾಪಿಸಿ ಬಿಸಿಮುಟ್ಟಿಸಿತ್ತು. ಕೃಷಿಕ ಮೊದಲೇ ಲೋ ವಾಲ್ಟೆಜ್ ಬಾದೆಯಿಂದ ಕಂಗೆಟ್ಟು ಹೋಗಿದ್ದು ಇದರ ನಡುವೆ ಬಿಸಿಲ ಪ್ರತಪಕ್ಕೆ ಬೇಸತ್ತು ಹೋಗಿದ್ದರು. ವರುಣ ಆಗಮನದಿಂದ ಧರೆ ತಂಪೆರದ್ದಂತಾಗಿದೆ.

ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೆಖ್ಯಾ, ಕಳೆಂಜ, ನೆರಿಯ, ಉಜಿರೆ ಗಡುಗು ಸಹಿತ ಗಾಳಿ ಮಳೆ ಸುರಿದಿದೆ. ಕೊಕ್ಕಡ ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ. ಧರ್ಮಸ್ಥಳ ಭಾಗದಲ್ಲಿ ಅಲಿಕಲ್ಲು ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತಿಗೆ ಗಾಳಿ ಸಹಿತ ಸಡಿಲುನೊಂದಿಗೆ ಮಳೆಯಾಗಿದೆ.

Related posts

ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ವೈಭವ:ಕನ್ನಡಿಗರ ‘ಟಾಕೀಸ್’ ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Suddi Udaya

ಭಜರಂಗದಳ ನಿಷೇಧ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ: ಹರೀಶ್ ಪೂಂಜ

Suddi Udaya

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya

ವಿಧಾನ ಪರಿಷತ್ತು ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ರವರಿಂದ ನಾಮಪತ್ರ ಸಲ್ಲಿಕೆ

Suddi Udaya

ನಂದಿಬೆಟ್ಟ: ನಂದಿಕೇಶ್ವರ ಭಜನಾ ಮಂಡಳಿ ಸಮಿತಿ ರಚನೆ

Suddi Udaya

ಬೆಳ್ತಂಗಡಿ ತಾ. ಪಂ ಲೆಕ್ಕ ಸಹಾಯಕ ಹುದ್ದೆಯಿಂದ ಬಿ.ವೃಂದದ ಲೆಕ್ಕಾಧಿಕಾರಿ ಹುದ್ದೆಗೆ ಭಡ್ತಿ ಗೊಂಡ ಜಯರಾಮ್ ರಿಗೆ ಅಭಿನಂದನೆ

Suddi Udaya
error: Content is protected !!