24.1 C
ಪುತ್ತೂರು, ಬೆಳ್ತಂಗಡಿ
May 7, 2025
Uncategorized

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ಎಸೆದವರಿಂದಲೇ ಕಸವನ್ನು ವಿಲೇವಾರಿ ಮಾಡಿಸಿ ರೂ. 3 ಸಾವಿರ ದಂಡ ವಿಧಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.

ಮಾ‌.15 ರಂದು ಪೂರ್ವಾಹ್ನ ಸುಮಾರು 11.30 ಕ್ಕೆ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಬಗ್ಗೆ ಬೆಳಕಿಗೆ ಬಂದಿದ್ದು,ಕಸದ ಚೀಲವನ್ನು ಪರಿಶೀಲಿಸಿದ ಸ್ಥಳೀಯರಾದ ಗಣೇಶ್ ಪ್ರಸಾದ್ ರವರು ಹೆಚ್ಚಿನ ಮುತುವರ್ಜಿ ವಹಿಸಿ ಕೆಲವೊಂದು ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪಂಚಾಯತ್ ಲೆಕ್ಕಸಹಾಯಕರಾದ ಸುಪ್ರೀತಾ ಶೆಟ್ಟಿಯವರ ಬಳಿ ವಿಷಯ ತಿಳಿಸಿದ ಕೂಡಲೇ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಸದ ಚೀಲವನ್ನು ಪರಿಶೀಲಿಸಿ ಸಂಬಂಧ ಪಟ್ಟ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯ ವಿಲೇವಾರಿ ಮಾಡಿಸಿದ್ದಲ್ಲದೇ ದಂಡನ ಶುಲ್ಕವನ್ನು ವಿಧಿಸಿದರು.

ಹೆಚ್ಚಿನ ಪರಿಶೀಲನೆ ನಡೆಸಿ ಇನ್ನೂ 3 ತ್ಯಾಜ್ಯಗಳ ಚೀಲಗಳು ರಸ್ತೆ ಬದಿ ಎಸೆದಿರುವುದು ಕಂಡುಬಂದಿದ್ದು, ಚೀಲಗಳನ್ನು ತೆರೆದಾಗ ಸಂಬಂಧ ಪಟ್ಟ ದಾಖಲೆಗಳು ದೊರೆತಿದ್ದು ಕೂಡಲೇ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಕರೆಸಿ ದಂಡನೆ ವಸೂಲಿ ಮಾಡಿಸಿದರು.

ಕಸ ವಿಲೇವಾರಿ ಮಾಡಿಸಿದ ಪಂಚಾಯತ್ ಪಿಡಿಓ ಶ್ರೀನಿವಾಸ್ ಡಿ.ಪಿ ಹಾಗೂ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅರವಿಂದ ಸ್ಥಳೀಯರಾದ ಗಣೇಶ್ ಪ್ರಸಾದ್ ಮತ್ತು ಮನೆಯವರು ಶ್ರದ್ದೆಶ್ ಹಾಗೂ ಸಾರ್ವಜನಿಕರು ಹೆಚ್ಚಿನ ಹಾಜರಿದ್ದರು.

Related posts

ಕಕ್ಕಿಂಜೆ ಶ್ರೀಕೃಷ್ಣ ಸ್ಟೋರ್ ಗೆ ನುಗ್ಗಿದ ಕಳ್ಳ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ಬಂದಾರು ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಹಿಂದೂ ಕಾಯ೯ಕತ೯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ತಂಗಡಿಯ ನೌಷದ್ ಪತ್ತೆಗೆ ಎನ್.ಐ.ಎ ರೂ. 2 ಲಕ್ಷ ಬಹುಮಾನ ಘೋಷಣೆ

Suddi Udaya

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya
error: Content is protected !!