23.1 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ : ಪರಪ್ಪು ಜಮಾಅತಿನ ಎರಡು ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆಡಳಿತ ಸಮಿತಿ, ಕೆ.ಸಿ.ಎಫ್,ಕೆ.ಎಮ್.ಜೆ., ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ಜಮಾಅತರಿಂದ ಸಹಾಯಧನ ಹಸ್ತಾಂತರ

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯವಾಗಿದ್ದು, ಈ ಮದುವೆಯನ್ನು ಇವರಿಗೆ ನೆರವೇರಿಸಲು ಕಷ್ಟಸಾದ್ಯವಾದದ್ದನ್ನು ಮನಗಂಡು ಪರಪ್ಪು ಜಮಾಅತ್ ನ ಆಡಳಿತ ಸಮಿತಿ, ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಗೇರುಕಟ್ಟೆಯ ಪಿ.ಎಸ್.ಮಹಮ್ಮದ್ ಮದನಿಯವರ ಮಗ ಸಲೀಕ್ ಎಂಬವರ ಮುತುವರ್ಜಿಯಿಂದ ಕೆ.ಸಿ.ಎಫ್ ಅಬೂಹದ್ರಿಯಾ ಘಟಕ, ಪರಪ್ಪು ಕೆ.ಎಮ್.ಜೆ, ಎಸ್.ವೈ.ಎಸ್, ಸ್ವಲಾತ್ ಸಮಿತಿ, ಎಸ್ ಎಸ್.ಎಫ್ ಹಾಗೂ ಜಮಾಅತರು ಸೇರಿಕೊಂಡು ಕ್ರೂಢಿಕರಿಸಿದ ನಗದನ್ನು ಎರಡು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಖತೀಬರಾದ ಎಫ್.ಎಚ್. ಮಹಮ್ಮದ್ ಮಿಸ್ಬಾಹಿ, ಕೆ. ಎಮ್.ಜೆ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್.ವೈ.ಎಸ್ ಅಧ್ಯಕ್ಷ ಸೈಫುಲ್ಲಾ,ಪಿ.ಎಸ್. ಮದನಿ, ಅಬ್ದುಲ್ ಖಾದರ್ ಹಾಜಿ, ಅಬೂಬಕ್ಕರ್ ಮರ್ಜೂಕಿ, ಮುಸ್ತಫ ಹಿಮಮಿ, ಎಸ್.ಎ.ಹಮೀದ್, ಇಹ್ ತಿಶಾಮ್ ಜಿ.ಎಚ್, ರಹಿಮಾನ್ ಮಾಸ್ಟರ್, ಉಮ್ಮರ್ ಜಿ ಎ, ಸಿದ್ದೀಕ್ ಜಿ.ಎಚ್., ನೌಷಾದ್, ಹಮೀದ್ ಜಿ.ಡಿ., ಇರ್ಫಾನ್ ಎಸ್, ಬಶೀರ್ ಎಸ್.ಎಮ್.ಎಸ್., ಸವಾದ್, ಮುಂತಾದವರು ಹಾಜರಿದ್ದರು.

Related posts

ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಮಚ್ಚಿನ ಸ.ಪ್ರೌ. ಶಾಲೆಗೆ 200 ತಟ್ಟೆ ಹಾಗೂ 2 ತಟ್ಟೆ ಇಡುವ ಸ್ಟಾಂಡ್ ಕೊಡುಗೆ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

Suddi Udaya

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಮಚ್ಚಿನ ಸ. ಪ್ರೌ.ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಯೋಗಿಶ್. ಎಸ್ ರವರಿಗೆ ಬೀಳ್ಕೊಡುಗೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಭಾರತ್ ಸ್ಕೌಟ್ ಆಂಡ್ ಗೈಡ್ ವಿಭಾಗದ ‘ಬನ್ನಿ’ ಉದ್ಘಾಟನೆ

Suddi Udaya

ಕಡಿರುದ್ಯಾವರ: ಕೊಪ್ಪದ ಗಂಡಿಯಲ್ಲಿ ಧರೆ ಕುಸಿತ : ಅಪಾರ ನಷ್ಟ

Suddi Udaya
error: Content is protected !!