April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ 10 ಪ್ರಾಂಚೈಸಿಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಉಜಿರೆ ಪ್ರೀಮಿಯರ್ ಲೀಗ್ ಸೀಸನ್ -5 ಎ.12 ಹಾಗೂ 13 ರಂದು ಉಜಿರೆ ಎಸ್.ಎಂ ಮೈದಾನದಲ್ಲಿ ನಡೆಯಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುದೇಶ್ ಶೆಟ್ಟಿ ಕುಂಟಿನಿ, ಉಜಿರೆ ಸಾಯಿ ಕಂಪ್ಯೂಟರ್ಸ್ ನ ಸೂರಜ್, ರೆಹಮಾನ್ ಗೌರವ ಉಪಸ್ಥಿತಿ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ನ ಸಿಇಒ ಲಾಂಚುಲಾಲ್ ಕೆ.ಎಸ್ ವಹಿಸಿದ್ದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಉಜಿರೆ ಪೂಜಾ ಏಜೆನ್ಸಿ ಮಾಲಕ ರತನ್, ಉಜಿರೆ ಅಸ್ತ್ರ ಫ್ರೆಂಡ್ಸ್ ನ ಸಂತೋಷ್ ವಿ., ಇಂಜಿನಿಯರ್ ಮಧು ಬಿ.ಕೆ ನಿಡ್ಲೆ, ಪೆರ್ಲ ಭಗವತಿ ಕ್ರಿಕೆಟರ್ಸ್ ನ ನಾಗೇಶ್, ಉಜಿರೆ ಶೀತಲ್ ಗಾರ್ಡನ್ ನ ಅಶ್ವತ್ ಶೆಟ್ಟಿ, ಬೆಳ್ತಂಗಡಿ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಯೋಗೀಶ್ ದೇವಾಡಿಗ ಗೌರವ ಉಪಸ್ಥಿತಿ ವಹಿಸಿದ್ದರು.

ನಿಡ್ಲೆ ಮನೋಜ್ ಮಾಲಕತ್ವದ ಬರಂಗಾಯ ತಂಡ (ಪ್ರಥಮ) 80,025 ಹಾಗೂ ಶ್ರೀ ಸಾಯಿ ಟ್ರೋಫಿ, ಬೆಳಾಲು ಸೆವೆನ್ ಸ್ಟಾರ್ ತಂಡ(ದ್ವಿತೀಯ) 40,025 ಹಾಗೂ ಶ್ರೀ ಸಾಯಿ ಟ್ರೋಫಿಯನ್ನು ಪಡೆದುಕೊಂಡಿದೆ.

Related posts

ಡಿ.5 : ಬೆಳ್ತಂಗಡಿ ಹಾಗೂ ಧರ್ಮಸ್ಥಳ ವಿದ್ಯುತ್ ಉಪಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕಕ್ಕೆರಾಜ್ಯ ಸದಸ್ಯೆಯಾಗಿ ಬರಹಗಾರ್ತಿ ಆಶಾ ಅಡೂರು, ಬೆಳ್ತಂಗಡಿ ನೇಮಕ .

Suddi Udaya

ಕಾಶಿಪಟ್ಣ ಬಂಟರ ಗ್ರಾಮ ಸಮಿತಿಯ ಸಭೆ : ಸಮಿತಿ ರಚನೆ

Suddi Udaya

ಸೆ.21: ಕರಾಯ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಜಿ. ಶೀಲಾವತಿ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಎಸ್ ಡಿ ಎಂ ಬೆಳ್ತಂಗಡಿಯಲ್ಲಿ “ಪರಿಸರ ಸ್ನೇಹಿ ಸ್ಕೌಟ್ ಗಣಪತಿ ಆಚರಣೆ

Suddi Udaya
error: Content is protected !!