30.2 C
ಪುತ್ತೂರು, ಬೆಳ್ತಂಗಡಿ
June 7, 2025
ಕ್ರೀಡಾ ಸುದ್ದಿ

ಬಂಟರ ಯಾನೆ ನಾಡವರ ಸಂಘ (ರಿ ) ಬೆಳ್ತಂಗಡಿ, ಬಂಟರ ಯುವ ವಿಭಾಗ ಮತ್ತು ಬಂಟರ ಮಹಿಳಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಣೆಜಾಲ್ ಇಂಡೋರ್ ಲಯನ್ಸ್ ಕ್ರೀಡಾಂಗಣದಲ್ಲಿ ಬಂಟರ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಬೆಳ್ತಂಗಡಿ :ಬಂಟರ ಯಾನೆ ನಾಡವರ ಸಂಘ (ರಿ ) ಬೆಳ್ತಂಗಡಿ, ಬಂಟರ ಯುವ ವಿಭಾಗ ಮತ್ತು ಬಂಟರ ಮಹಿಳಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಣೆಜಾಲ್ ಇಂಡೋರ್ ಲಯನ್ಸ್ ಕ್ರೀಡಾಂಗಣದಲ್ಲಿ ಬಂಟರ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.

ಇದರ ಉದ್ಘಾಟನೆಯನ್ನು ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ. ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಜಯಂತ ಶೆಟ್ಟಿ ಭಂಡಾರಿಗುಡ್ಡೆಯವರು ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಶ್ರೀ ಶೇಖರ್ ಶೆಟ್ಟಿ ಮನಸ್ವಿ ಪಣೆಜಾಲು ಉದ್ಯಮಿಗಳು ಶ್ರೀ ಜಯಂತ ಶೆಟ್ಟಿ ಕುಂಟಿನಿ ಉಪಾಧ್ಯಕ್ಷರು, ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಶ್ರೀ ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ, ಸಂಚಾಲಕರು ಯುವ ಬಂಟ ವಿಭಾಗ ಇವರು ಭಾಗವಹಿದ್ದರು. ವೇದಿಕೆಯಲ್ಲಿ ಶ್ರೀ ವಸಂತ ಶೆಟ್ಟಿ ಶ್ರದ್ದಾ ಕೋಶಾಧಿಕಾರಿ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಶ್ರೀ ಜಯರಾಮ ಭಂಡಾರಿ ಧರ್ಮಸ್ಥಳ, ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ ) ಮಂಗಳೂರು, ಶ್ರೀ ರಘುರಾಮ ಶೆಟ್ಟಿ ಸಾಧನ, ಮಾಜಿ ಅಧ್ಯಕ್ಷರು ಬಂಟರ ಸಂಘ ಬೆಳ್ತಂಗಡಿ, ಶ್ರೀಮತಿ ವನಿತಾ ವಿ. ಶೆಟ್ಟಿ ಅಧ್ಯಕ್ಷರು, ಉಜಿರೆ ವಲಯ, ಶ್ರೀ ಆನಂದ ಶೆಟ್ಟಿ ಐಸಿರಿ, ನಿರ್ದೇಶಕರು ಬಂಟರ ಸಂಘ ಬೆಳ್ತಂಗಡಿ ,ವೆಂಕಟ್ರಮಣ ಶೆಟ್ಟಿ ಉಜಿರೆ ಕ್ರೀಡಾ ಸಂಚಾಲಕರು ಬಂಟರ ಸಂಘ ಬೆಳ್ತಂಗಡಿ ಉಪಸ್ಥಿತರಿದ್ದರು. ಶ್ರೀ ರಾಜು ಶೆಟ್ಟಿ ಬೆಂಗತ್ಯಾರ್ ಸ್ವಾಗತಿಸಿದರು. ಶ್ರೀ ಸುರೇಶ್ ಶೆಟ್ಟಿ ಲಾಯಿಲ ಧನ್ಯವಾದವಿತ್ತರು. ಶ್ರೀ ಕಿರಣ್ eಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಪಂದ್ಯಾಟದಲ್ಲಿ ತಾಲೂಕಿನ ಬಂಟ ಸಮಾಜದ 40 ತಂಡಗಳು ಭಾಗವಹಿಸಿದ್ದವು.

Related posts

ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಹೋಲಿ ರಿಡೀಮರ್ ವಿದ್ಯಾರ್ಥಿಗಳ ಸಾಧನೆ

Suddi Udaya

ತ್ರೋಬಾಲ್ ಪಂದ್ಯಾಟ: ಕರಂಬಾರು ಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ : ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸಮರ್ಥ್ ಭಟ್ ತೃತೀಯ

Suddi Udaya

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಕಾಶಿಪಟ್ಣ ಸ.ಪ್ರೌ. ಶಾಲೆಯ ಶಿಕ್ಷಕಿ ಸೌಮ್ಯರವರಿಗೆ 4 ಬೆಳ್ಳಿ ಹಾಗೂ 1 ಕಂಚಿನ ಪದಕ

Suddi Udaya

ಸ್ವಾಗತ್ ಫ್ರೆಂಡ್ಸ್ ಪೆರಿಂಜೆ ಆಶ್ರಯದಲ್ಲಿ ಗಣೇಶ್ ಚತುರ್ಥಿಯ ಪ್ರಯುಕ್ತ 11ನೇ ವರ್ಷದ ಕ್ರೀಡಾಕೂಟ

Suddi Udaya

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ; ನಡ ಪ.ಪೂ. ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya
error: Content is protected !!