July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು : ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ


ಇಂದಬೆಟ್ಟು: ಯುವ ಸಂಘಟನೆ ನವ ಭಾರತ್ ಗೆಳೆಯರ ಬಳಗ ಕಲ್ಲಾಜೆ ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆಯು ಎ 20 ರಂದು ಕಲ್ಲಾಜೆ ಶಾಲಾ ವಠಾರದಲ್ಲಿ ಯತೀಶ್ ನೆರೋಲ್ದಪಲ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಯ ನಡವಳಿ, ವಾರ್ಷಿಕ ವರದಿ, ಲೆಕ್ಕ ಪತ್ರ ಪರಿಶೋಧನಾ ವರದಿಯನ್ನು ಕಾರ್ಯದರ್ಶಿ ಅವಿನಾಶ್ ಕಲ್ಲಾಜೆ ಸಭೆಗೆ ಮಂಡಿಸಿದರು. ಸದಸ್ಯರ ಸರ್ವಾನುಮತದಿಂದ ಅಂಗೀಕಾರ ಪಡೆಯಲಾಯಿತು. 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಅಧ್ಯಕ್ಷರಾಗಿ ರಮೇಶ್ ನೂಜಿಲೆ, ಕಾರ್ಯದರ್ಶಿಯಾಗಿ ಜಗದೀಶ್ ನೆರೋಲ್ದಪಲ್ಕೆ, ಕೋಶಾಧಿಕಾರಿಯಾಗಿ ಪ್ರತೀಕ್ಷ್ ಹಾನಿಬೆಟ್ಟು, ಉಪಾಧ್ಯಕ್ಷರಾಗಿ ಜಯ ನೂಜಿಲೆ, ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಮುಂಡ್ರಬೆಟ್ಟು, ಧಾರ್ಮಿಕ ವಿಭಾಗದ ನಿರ್ದೇಶಕರಾಗಿ ರಾಜೇಶ್ ಹೆಬ್ಬಾರಪಲ್ಕೆ, ಶ್ರೀಕಾಂತ್ ಸೋಮಯ್ಯದಡ್ಡು, ಆರೋಗ್ಯ ವಿಭಾಗದ ನಿರ್ದೇಶಕರಾಗಿ ಪ್ರಜ್ವಲ್ ಇಂದಬೆಟ್ಟು, ಕ್ರೀಡಾ ವಿಭಾಗದ ನಿರ್ದೇಶಕರಾಗಿ ಅವಿನಾಶ್ ಸೋಮಯ್ಯದಡ್ಡು, ಶೈಕ್ಷಣಿಕ ವಿಭಾಗದ ನಿರ್ದೇಶಕರಾಗಿ ನವೀನ್ ನೇತ್ರಾವತಿ ನಗರ, ಮಾಧ್ಯಮ ಮತ್ತು ಪ್ರಚಾರ ವಿಭಾಗದ ನಿರ್ದೇಶಕರಾಗಿ ಸಂದೀಪ್ ಅಲಕ್ಕೆ ಇವರನ್ನು ಆಯ್ಕೆ ಮಾಡಲಾಯಿತು.

ಅವಿನಾಶ್ ಕಲ್ಲಾಜೆ ಸ್ವಾಗತಿಸಿದರು, ಜಗದೀಶ್ ನೆರೋಲ್ದಪಲ್ಕೆ ಧನ್ಯವಾದವಿತ್ತರು.

Related posts

ಉಜಿರೆ :ರೋಟರಿ ಕ್ಲಬ್ ನಲ್ಲಿ ಇಫ್ತಾರ್ ಆಚರಣೆ

Suddi Udaya

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀ ರಾಮ ನವಮಿ ಆಚರಣೆ

Suddi Udaya

ಧರ್ಮಸ್ಥಳ: ಹೂತ ಮೃತದೇಹಗಳ ಅವಶೇಷ ಹೊರತೆಗೆಯುವ ಕಾರ್ಯ ಪ್ರಾರಂಭ :ಬಿಗಿ ಪೊಲೀಸ್ ಬಂದೋಬಸ್ತ್

Suddi Udaya

ಸಿಎ ಅಂತಿಮ ಪರೀಕ್ಷೆ ಫಲಿತಾಂಶ: ಮುದ್ದಾಡಿಯ ದೀಪಕ್ ಹೆಗ್ಡೆಗೆ 28ನೇ ರ್‍ಯಾಂಕ್

Suddi Udaya

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 11 ಜೋಡಿಗಳಿಗೆ ಸಾಮೂಹಿಕ ವಿವಾಹ ನಿಶ್ವಿತಾರ್ಥ,

Suddi Udaya

ಬೆಳ್ತಂಗಡಿ: ತಲೆಮಲೆರಿಸಿಕೊಂಡಿದ್ದ ವಾರೆಂಟ್ ಆರೋಪಿ ಸತೀಶ್ ದ್ರಾವಿಡ ಪೊಲೀಸ್ ವಶಕ್ಕೆ

Suddi Udaya
error: Content is protected !!