24 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿ. ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ,


ಈ ಕೂಡಲೇ ಕೇಂದ್ರ ಸರ್ಕಾರ ನಾವು “ಬಯಸುವ ನ್ಯಾಯ”ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಗೃಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ.
ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನು ಕೊಲ್ಲುವುದೇ ತಮ್ಮ ಮತದ ಉಳಿವಿಗೆ ದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.


ಇಸ್ಲಾಂಗೂ ಭಯೋತ್ಪಾದಕರಿಗೂ ಸಂಬAಧ ಇಲ್ಲ ಎಂದು ಒಪ್ಪಿಕೊಳ್ಳೋಣ, ಹುಡುಕಿ ಹುಡುಕಿ ಹಿಂದುಗಳನ್ನ ಕೊಂದು ಆ ರಾಕ್ಷಸರು ಮೊಳಗಿಸಿದ ಉದ್ಘೋಷ ಏನು ಸಂದೇಶ ಸಾರುತ್ತದೆ ಎಂದು ಯೋಚಿಸಬೇಕಾಗಿದೆ.
ಕೇಡು ವಿಜೃಂಭಿಸುವಾಗ ಪ್ರತಿಘಾತ ಮಾಡದ ಸಾತ್ವಿಕತೆ/ಮೌನ ನಿಷ್ಪçಯೋಜಕವಾಗುತ್ತದೆ. ಕೇವಲ ಹತ್ತು ಜನ ಕೆಟ್ಟವರಿಗಾಗಿ ಒಂದು ಸಮುದಾಯಕ್ಕೆ ಭಯೋತ್ಪಾದನೆಯ ಕಳಂಕ ಹಾಕಬಾರದು ಎನ್ನುತ್ತಾರೆ. ಹತ್ತು ಕೆಟ್ಟವರನ್ನ ಬಿಡಿ ಉಳಿದ ೯೦ ಒಳ್ಳೆಯ ಮುಸಲ್ಮಾನರಲ್ಲಿ ಒಬ್ಬರು ಧ್ವನಿಯೆತ್ತಿ ಖಂಡಿಸಿದ್ದನ್ನು ಕೇಳಲೇ ಇಲ್ಲ, ಇದು ದುರಂತ. ಘಟನೆಯನ್ನು ಖಂಡಿಸಿ ಬೀದಿಗೆ ಇಳಿದಿದ್ದನ್ನು ಕಾಣಲಿಲ್ಲ. ಸಾತ್ವಿಕ ಮುಸಲ್ಮಾನ್ ಬಂಧುಗಳೇ, ಇದು ನಿಮಗೂ ಎಚ್ಚರಿಕೆಯ ಕರೆಗಂಟೆ. ನಿಮ್ಮ ಮೌನ ನಿಮ್ಮನ್ನೇ ಕಾಡಲಿದೆ. ನಿಮ್ಮ ಮತದೊಳಗಿನ ಕೊಳಕನ್ನು ನೀವಿನ್ನು ಸಹಾನುಭೂತಿಯಿಂದ ನೋಡುತ್ತಾ ಕುಳಿತರೆ ಮುಂದಾಗುವ ಎಲ್ಲಾ ಅನಾಹುತಗಳಲ್ಲಿ ನೀವೂ ಪಾಲುದಾರರಾಗುತ್ತೀರಿ. ನಿಮ್ಮ ಮೌನವೇ ಉಗ್ರಗಾಮಿಗಳಿಗೆ ಶ್ರೀರಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಶಾಸಕ ಹರೀಶ್ ಪೂಂಜರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಧರ್ಮಸ್ಥಳ: ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ ಖ್ಯಾತ ಚಲನಚಿತ್ರ ನಟ ಸಿಹಿಕಹಿ ಚಂದ್ರು ರವರಿಂದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ಉಜಿರೆ ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ “ ದೀಕ್ಷಾ ಸಂಸ್ಕಾರ” ಸಮಾರಂಭ

Suddi Udaya

ಪವರ್ ಮ್ಯಾನ್ ದಿ| ಸುಧಾಕರರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ, ಮನೆಯವರಿಗೆ ಸಾಂತ್ವನ

Suddi Udaya

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ, ದೇವರ ದರ್ಶನ

Suddi Udaya

ಕೊಕ್ಕಡ: ಎಂಡೋ ಸಂತ್ರಸ್ತರ ಪುನರ್‌ವಸತಿ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕ ಹರೀಶ್ ಪೂಂಜರಿಂದ ಭೂಮಿ ಪೂಜೆ

Suddi Udaya
error: Content is protected !!